Advertisement

Thirthahalli; ರಂಜದಕಟ್ಟೆ ಬಳಿ ಅಪಘಾತ: ವೃದ್ಧ ಮೃತ್ಯು

11:58 PM Sep 29, 2023 | Team Udayavani |

ತೀರ್ಥಹಳ್ಳಿ : ರಸ್ತೆಯಲ್ಲಿ ನೆಡೆದುಕೊಂಡು ಹೋಗುತ್ತಿದ್ದ ವೃದ್ಧರೊಬ್ಬರಿಗೆ 407 ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ವೃದ್ದರೊಬ್ಬರು ಸಾವನ್ನಪ್ಪಿರುವ ಘಟನೆ ರಂಜದಕಟ್ಟೆ ಬಳಿ ನೆಡೆದಿದೆ.

Advertisement

ತಾಲೂಕಿನ ಆಲಗೇರಿ ಸಮೀಪದ ಹೊಳೆಮೊದ್ಲು ಗ್ರಾಮದ ಚನ್ನಪ್ಪ ಗೌಡ 65 ವರ್ಷ ಮೃತಪಟ್ಟ ದುರ್ದೈವಿ. ತೀರ್ಥಹಳ್ಳಿಯಿಂದ ಬಸ್ ಇಳಿದು ಊರಿಗೆ ಹೋಗುವಾಗ ರಂಜದಕಟ್ಟೆ ಬಳಿ ಈ ಘಟನೆ ಸಂಭವಿಸಿದೆ. ಕೂಡಲೇ ಅವರನ್ನು ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಹೆಬ್ರಿ ಸಮೀಪ ಮೃತಪಟ್ಟಿದ್ದಾರೆ. ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

Advertisement

Udayavani is now on Telegram. Click here to join our channel and stay updated with the latest news.

Next