Advertisement

ಸುರಪುರದಲ್ಲಿ ಕಳ್ಳನ ಸೆರೆ: 10 ಬೈಕ್‌ ವಶ

05:07 PM Jun 02, 2022 | Team Udayavani |

ಸುರಪುರ: ನಗರ ಮತ್ತು ಸುತ್ತಮುತ್ತಲೂ ಕಳೆದ ನಾಲ್ಕೈದು ತಿಂಗಳಿಂದ ನಡೆಯುತ್ತಿದ್ದ ಬೈಕ್‌ಗಳ ಕಳ್ಳತನ ಪ್ರಕರಣಗಳು ಬೈಕ್‌ ಮಾಲೀಕರಿಗೆ ತಲೆನೋವಾಗಿದ್ದವು. ಈ ಬಗ್ಗೆ ಪುರಪುರ ಠಾಣೆಯಲ್ಲಿ ಹಲವು ದೂರುಗಳು ದಾಖಲಾಗಿದ್ದವು.

Advertisement

ಕಳ್ಳರ ಪತ್ತೆಗೆ ಠಾಣೆ ಅಧಿಕಾರಿಗಳಾದ ಸುನೀಲ ಮೂಲಿಮನಿ, ಕೃಷ್ಣ ಸುಬೇದಾರ ಮತ್ತು ನಬಿಲಾಲ್‌ ನೇತೃತ್ವದಲ್ಲಿ ತಂಡಗಳನ್ನು ರಚಿಸಲಾಗಿತ್ತು. ಈ ತಂಡ ಕಳ್ಳನ ಪತ್ತೆ ಹಚ್ಚಲು ಯಶಸ್ವಿಯಾಗಿ ಕಳ್ಳತನ ಮಾಡಿದ್ದ 10 ಮೋಟಾರ್‌ ಬೈಕ್‌ ಗಳನ್ನು ವಶಪಡಿಸಿಕೊಂಡಿದೆ.

ಈ ಬಗ್ಗೆ ಬುಧವಾರ ಸುರಪುರದಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿ ಕಾರಿ ಡಾ|ಸಿ.ಬಿ. ವೇದಮೂರ್ತಿ, ದೇವದುರ್ಗದ ಹನುಮಂತ ಎಂಬ ವ್ಯಕ್ತಿಯ ಮೇಲೆ ಅನುಮಾನಗೊಂಡ ನಮ್ಮ ಅಧಿಕಾರಿಗಳು ವಿಚಾರಿಸಿದಾಗ ಕಳ್ಳತನ ಬಯಲಿಗೆ ಬಂದಿದೆ. ಆರೋಪಿಯನ್ನು ಬಂಧಿಸಲಾಗಿದೆ ಎಂದರು.

ಆರೋಪಿ ಯಾದಗಿರಿ ಜಿಲ್ಲೆಯ ವಿವಿಧೆಡೆ ಮತ್ತು ಲಿಂಗಸುಗೂರಿನಲ್ಲೂ ಕಳ್ಳತನ ಮಾಡಿದ್ದಾನೆ. ಜನರು ಬೈಕ್‌ ಗಳಿಗೆ ಸೈಡ್‌ ಲಾಕ್‌ ಹಾಕಿ, ಅವಶ್ಯವಿದ್ದಲ್ಲಿ, ವ್ಹೀಲ್‌ ಲಾಕ್‌ ಮಾಡಬೇಕು ಎಂದು ಮನವಿ ಮಾಡಿದರು. ಕಳ್ಳನ ಪತ್ತೆ ಹಚ್ಚಿದ ಅಧಿಕಾರಿಗಳಿಗೆ ಬಹುಮಾನ ನೀಡಲಾಗುವುದು ಎಂದು ಎಸ್ಪಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next