Advertisement

ಶಬರಿಮಲೆ ಪ್ರವೇಶಿಸಿದ ಮಹಿಳೆಯರು ನಕ್ಸಲರು:ಕಾಂಗ್ರೆಸ್‌ ಎಂಪಿ

11:50 AM Jan 03, 2019 | |

ಹೊಸದಿಲ್ಲಿ: ಬುಧವಾರ ಶಬರಿಮಲೆ ಪ್ರವೇಶಿಸಿದ ಇಬ್ಬರು ಮಹಿಳೆಯರು ಮಾವೋವಾದಿಗಳು ಎಂದು ಕೇರಳದ ಕಾಂಗ್ರೆಸ್‌ ಸಂಸದ ಕೆ.ಸುರೇಶ್‌ ಹೇಳಿಕೆ ನೀಡಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾವು ಕೇರಳದಲ್ಲಿ ಕರಾಳ ದಿನವನ್ನು ಆಚರಿಸುತ್ತಿದ್ದೇವೆ. ರಾಜ್ಯ ಸರ್ಕಾರ ಶಬರಿಮಲೆ ಭಕ್ತರ ಭಾವನೆಗಳ ಮೇಲೆ ಸಲಾವು ಹಾಕುತ್ತಿದೆ. ರಾಜ್ಯ ಸರ್ಕಾರದ ಪ್ರಾಯೋಜಕತ್ವದಲ್ಲಿ , ಈ ಇಬ್ಬರು ಮಹಿಳೆಯರು ದೇವಾಲಯ ಪ್ರವೇಶಿಸಿದ್ದಾರೆ. ಅವರು ಕಾರ್ಯಕರ್ತೆಯರು. ಅವರು ಮಾವೋವಾದಿಗಳು ಎಂದು ಕಿಡಿ ಕಾರಿದರು.

ಕೇರಳದಲ್ಲಿ  ಗುರುವಾರ ಹರತಾಳ ನಡೆಸಲಾಗುತ್ತಿದ್ದು, ಕಾಂಗ್ರೆಸ್‌ ನೇತೃತ್ವದ ಯುಡಿಎಫ್ ಕರಾಳ ದಿನವನ್ನು ಆಚರಿಸುತ್ತಿದೆ. ವಿವಿಧೆಡೆ ಹಿಂಸಾಚಾರ ನಡೆದಿದ್ದು ಹಲವರಿಗೆ ಇರಿದ ಬಗ್ಗೆಯೂ ಪ್ರಕರಣಗಳು ದಾಖಲಾಗಿವೆ. 

ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ವಿರೋಧವಿದ್ದ ಹೊರತಾಗಿಯೂ ನಲವತ್ತು ಆಸುಪಾಸು ವಯಸ್ಸಿನ ಇಬ್ಬರು ಮಹಿಳೆ  ಯರಾದ  ಕನಕದುರ್ಗಾ (42) ಮತ್ತು ಬಿಂದು (42)ಎಂಬವರು ಬುಧವಾರ ಬೆಳಗಿನ ಜಾವ ಬೆಳಗಿನ ಜಾವ 3.45ಕ್ಕೆ ದೇಗುಲದ ಸನ್ನಿಧಾನಂ ಪ್ರವೇಶಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next