Advertisement

Prathima Case; ಪ್ರತಿಮಾಗೆ ಯಾವುದೇ ಬೆದರಿಕೆ ಇರಲಿಲ್ಲ: ಅತ್ತೆ ಪ್ರತಿಕ್ರಿಯೆ

01:45 PM Nov 05, 2023 | Kavyashree |

ತೀರ್ಥಹಳ್ಳಿ : ಟಿವಿ ಮಾಧ್ಯಮಗಳಲ್ಲಿ ಬರುತ್ತಿರುವುದು ಸುಳ್ಳು. ನಮ್ಮ ಫ್ಯಾಮಿಲಿ ತುಂಬಾ ಚನ್ನಾಗಿ ಇದ್ವಿ. ಹತ್ತು ದಿನಗಳ ಹಿಂದೆ ದಸರಾ ದಿನ ಗೃಹ ಪ್ರವೇಶಕ್ಕೆ ಬಂದಿದ್ದರು. ಒಂದು ವಾರ ತೀರ್ಥಹಳ್ಳಿಯಲ್ಲೇ ಇದ್ದರು. ಗೃಹಪ್ರವೇಶ ಮಾಡಿ ಬೆಂಗಳೂರಿಗೆ ತೆರಳಿದ್ದರು. ಪ್ರತಿಮಾ ಅವರ ಅಣ್ಣ ಅಳುತ್ತಾ ಬಂದ ಮೇಲೆ ನಮಗೆ ವಿಚಾರ ಗೊತ್ತಾಯಿತು. ಅವಳದು ತುಂಬಾ ನಗುತ್ತಾ ಇರುವ ಸ್ವಾಭಾವ ಎಂದು ಪ್ರತಿಮಾ ಅತ್ತೆ ಪ್ರೇಮಾ ಉದಯವಾಣಿಗೆ ಪ್ರತಿಕ್ರಿಯೆ ನೀಡಿದ್ದಾರೆ.

Advertisement

ತೀರ್ಥಹಳ್ಳಿ ಮೂಲದ ಬೆಂಗಳೂರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಉದಯವಾಣಿ  ಜೊತೆ ಮಾತನಾಡಿದ ಆಕೆಯ ಅತ್ತೆ, ನಿನ್ನೆ ಕೂಡ ಪ್ರತಿಮಾ ಕರೆ ಮಾಡಿದ್ದರು. ಅವರಿಗೆ ಯಾವುದೇ ಬೆದರಿಕೆ ಇರಲಿಲ್ಲ. ಕಳೆದ ಮೂರು ವರ್ಷಗಳಿಂದ ಬೆಂಗಳೂರಿನಲ್ಲೇ ಪ್ರತಿಮಾ ವಾಸವಾಗಿದ್ದರು ಎಂದಿದ್ದಾರೆ.

ಪ್ರತಿಮಾ ಅವರ ಪತಿ ರಾಮಣ್ಣ ಕೃಷಿಕರಾಗಿದ್ದು, ಮಗ ಪಟ್ಟಣದ ಸಹ್ಯಾದ್ರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಇಂದಾವರದ ತುಂಗಾ ಕಾಲೇಜಿನ ಸಮೀಪದಲ್ಲಿ ಕಳೆದ 15 ದಿನಗಳ ಹಿಂದೆ ಹೊಸಮನೆ ಗೃಹ ಪ್ರವೇಶ ನಡೆಸಿದ್ದರು. ಪ್ರತಿಮಾ ಅವರ ಹತ್ಯೆಯಾಗಿರುವುದು ಆಘಾತ ತಂದಿದೆ ಎಂದು ಕುಟುಂಬಸ್ಥರು ತಿಳಿಸಿದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next