Advertisement

ಮಸೀದಿಗಿಂತ ಮೊದಲೇ ಅಲ್ಲಿ ಬೃಹತ್‌ ಕಟ್ಟಡವಿತ್ತು

11:45 AM Oct 05, 2019 | Team Udayavani |

ನವದೆಹಲಿ: ಅಯೋಧ್ಯೆಯಲ್ಲಿ ಬಾಬರಿ ಮಸೀದಿ ನಿರ್ಮಾಣಕ್ಕಿಂತ ಮೊದಲು ಬೃಹತ್‌ ಕಟ್ಟಡ ನಿರ್ಮಾಣವಾಗಿತ್ತು. ಈ ಹಿಂದೆ ನಡೆಸಿದ ಉತVನನದಿಂದ ಅದು ಸಾಬೀತಾಗಿದೆ ಎಂದು ರಾಮಲಲ್ಲ ಪರ ವಕೀಲ ಸಿ.ಎಸ್‌.ವೈದ್ಯನಾಥನ್‌ ಸುಪ್ರೀಂಕೋರ್ಟ್‌ಗೆ ಹೇಳಿದ್ದಾರೆ. ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ನೇತೃತ್ವದ ಐವರು ಸದಸ್ಯರ ಸಾಂವಿಧಾನಿಕ ಪೀಠದ ಮುಂದೆ ಅಯೋಧ್ಯೆಯಲ್ಲಿರುವ 2.77 ಎಕರೆ ಜಮೀನು ಮಾಲೀಕತ್ವದ ವಿಚಾರಣೆ ವೇಳೆ ಅವರು ಈ ಮಾಹಿತಿ ನೀಡಿದ್ದಾರೆ.

Advertisement

ಬಾಬರಿ ಮಸೀದಿ ನಿರ್ಮಾಣದ ಮೊದಲು ಅಲ್ಲಿ ಮುಸ್ಲಿಂ ಸಮುದಾಯ ಪ್ರಾರ್ಥನೆ ಸಲ್ಲಿಸುವ ಸ್ಥಳವಾಗಿತ್ತು ಅಥವಾ ಮುಸ್ಲಿಂ ಸಮುದಾಯದ ಸಂಸ್ಕೃತಿ ಬಿಂಬಿಸುವ ಕಟ್ಟಡ ನಿರ್ಮಾಣವಾಗಿತ್ತು ಎಂಬ ಸಂಘಟನೆಗಳ ವಾದವೇ ಸರಿಯಲ್ಲ. ಆ ಸ್ಥಳದಲ್ಲಿ ಮೊದಲಿನಿಂದಲೂ ದೇಗುಲವೇ ಇತ್ತು ಎನ್ನುವುದು ನಮ್ಮ ವಾದ. ಅದನ್ನು ನಾಶಗೊಳಿಸಿದ ಬಳಿಕ ಅದರ ಕಂಬಗಳು ಉತVನನದ ವೇಳೆ ಕಂಡು ಬಂದಿವೆ ಎಂದು ವೈದ್ಯನಾಥನ್‌ ತಮ್ಮ ವಾದ ಮಂಡನೆ ವೇಳೆ ವಿವರಿಸಿದರು. ಹೀಗಾಗಿ, ಮಸೀದಿ ನಿರ್ಮಾಣಕ್ಕೂ ಮುನ್ನ ಅಲ್ಲಿ ಬೃಹತ್‌ ಕಟ್ಟಡ ಅಂದರೆ ದೇಗುಲವೇ ಇತ್ತು ಎನ್ನುವುದು ನಿರ್ವಿವಾದದ ಸಂಗತಿ ಎಂದು ಪ್ರತಿಪಾದಿಸಿದರು. ಮುಸ್ಲಿಂ ಸಂಘಟನೆಗಳ ಪರ ವಾದಿಸಿದ ನ್ಯಾಯವಾದಿ ರಾಜೀವ್‌ ಧವನ್‌, ಭಾರತೀಯ ಪುರಾತತ್ವ ಇಲಾಖೆಯ ವರದಿಯ ಪ್ರಕಾರ ದೇಗುಲ ಹೇಗೆ ನಾಶವಾಯಿತು ಎನ್ನುವುದಕ್ಕೆ ಆಧಾರಗಳನ್ನು ನೀಡಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next