Advertisement

Bengaluru; ಜೀವನದಲ್ಲಿ ಧೈರ್ಯವಿರಬೇಕು, ಭಂಡತನ ಇರಬಾರದು: ಡಿಸಿಎಂ ಡಿಕೆಶಿವಕುಮಾರ್‌

11:15 AM Jan 14, 2024 | Team Udayavani |

ಬೆಂಗಳೂರು : ಹೆಲ್ಮೆಟ್‌ ಧರಿಸಿ ಮೋಟಾರು ಬೈಕ್‌ ಚಾಲನೆ ಮಾಡದೇ ಇರುವುದು, ಫ‌ುಟ್‌ಪಾತ್‌ ಮೇಲೆ ಗಾಡಿ ಚಲಾಯಿಸುವುದು ಸೇರಿದಂತೆ ಸಂಚಾರ ನಿಯಮ ಉಲ್ಲಂಘನೆ ಪ್ರಕರಣದಲ್ಲಿ ಕಳೆದ ವರ್ಷ ಅಧಿಕ ಸಂಖ್ಯೆಯಲ್ಲಿ ಯುವಕರೇ ಹೆಚ್ಚು ಸಾವನ್ನಪ್ಪಿದ್ದಾರೆ. ಜೀವನದಲ್ಲಿ ಧೈರ್ಯವಿರಬೇಕು. ಆದರೆ, ಭಂಡತನ ಇರಬಾರದು. ರಸ್ತೆ ಸಂಚಾರ ನಿಯಮ ಪಾಲನೆ ಯುವ ಸಮುದಾಯ ಆದ್ಯತೆ ನೀಡಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದರು.

Advertisement

ಬೆಂಗಳೂರು ನಗರ ಸಂಚಾರ ಪೊಲೀಸರು ಕಂಠೀರವ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ “ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ -24 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಳೆದ 3 ವರ್ಷಗಳಲ್ಲಿ 6 ಸಾವಿರಕ್ಕೂ ಹೆಚ್ಚು ಡ್ರೈವಿಂಗ್‌ ಲೈಸೆನ್ಸ್‌ಗಳನ್ನು ಅಮಾನತು ಮಾಡಲಾಗಿದೆ. ಎನ್‌ಸಿಆರ್‌ಬಿ ಅಂಕಿಅಂಶಗಳ ಪ್ರಕಾರ ಬೈಕ್‌ ಅಪಘಾತಗಳಿಂದ ಅತ್ಯಂತ ಹೆಚ್ಚು ಮರಣಗಳಾಗಿವೆ. ಆದ ಕಾರಣ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್‌ ಧರಿಸಬೇಕು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next