Advertisement

ಸಾಲ ಮರಳಿಸುವಂತೆ ಕೇಳುವುದರಲ್ಲಿ ತಪ್ಪಿಲ್ಲ

11:36 PM Mar 27, 2021 | Team Udayavani |

ಬ್ಯಾಂಕ್‌ ಮತ್ತು ಹಣಕಾಸು ಸಂಸ್ಥೆ ಗಳಿಗೆ ಸಾಲ ವಸೂಲಾತಿ ಬಲುದೊಡ್ಡ ತಲೆನೋವಿನ ವಿಷಯವಾಗಿದೆ. ಸಾಲ ವಸೂಲಾತಿಗಾಗಿ ಬ್ಯಾಂಕ್‌ ಮತ್ತು ಹಣಕಾಸು ಸಂಸ್ಥೆಗಳು ಹಲವಾರು ಮಾರ್ಗಗಳನ್ನು ಅನುಸರಿಸುತ್ತವೆ. ಇವು ಗಳಲ್ಲಿ ವಸೂಲಾತಿ ಏಜೆಂಟರ (Reco very agents) ನೇಮಕವೂ ಒಂದು. ಪಾರಂಪರಿಕ ವಿಧಾನಗಳಲ್ಲಿ ಮತ್ತು ನ್ಯಾಯಾಲಯದ ಮೊರೆಹೋದ ಸಂದರ್ಭಗಳಲ್ಲಿ ವಸೂಲಾತಿ ವಿಳಂಬ ವಾಗುವುದರಿಂದ ಕೆಲವು ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು ಸಾಲ ವಸೂಲಾತಿಗೆ ಏಜೆಂಟರನ್ನು ನೇಮಿ ಸುತ್ತವೆ. ಈ ಏಜೆಂಟರು ಬ್ಯಾಂಕ್‌ನ ಪರವಾಗಿ ಸಾಲಗಾರರಿಂದ ಸಾಲ ಬಾಕಿ ಯನ್ನು ವಸೂಲು ಮಾಡುತ್ತಾರೆ.

Advertisement

ಸಾರ್ವಜನಿಕ ರಂಗದ ಬ್ಯಾಂಕ್‌ಗಳಲ್ಲಿಯೂ ವಸೂಲಾತಿ ಏಜೆಂಟರು ಗಳು ಇರುವರಾದರೂ ಇವರ ಬಳಕೆ ತೀರಾ ಕಡಿಮೆಯಾಗಿದ್ದು ಎಲ್ಲ ಕಾನೂನು ಪ್ರಕ್ರಿಯೆಗಳು ಮುಗಿದ ಬಳಿಕವಷ್ಟೇ ಇವರು ಸಾಲ ವಸೂ ಲಾತಿಗೆ ಮುಂದಾಗುತ್ತಾರೆ. ಆದರೆ ಖಾಸಗಿ ಬ್ಯಾಂಕ್‌ ಮತ್ತು ಖಾಸಗಿ ಹಣಕಾಸು ಸಂಸ್ಥೆಗಳಲ್ಲಿ ವಸೂಲಾತಿ ಏಜೆಂಟರುಗಳನ್ನು ಸಾಲ ವಸೂಲಾತಿಗೆ ಬಳಸಿಕೊಳ್ಳುವುದು ಸಾಮಾನ್ಯ ಪ್ರಕ್ರಿಯೆ. ಸಾಲ ಬಾಕಿದಾರರ ವಿಚಾರದಲ್ಲಿ ಖಾಸಗಿ ಸಂಸ್ಥೆಗಳು ತುಸು ನಿರ್ದಾಕ್ಷಿಣ್ಯ ಧೋರಣೆ ಅನುಸರಿಸುವುದರಿಂದ ಏಜೆಂಟರುಗಳ ಪಾತ್ರ ಬಲು ಮಹತ್ವದ್ದಾಗಿರುತ್ತದೆ. ಆದರೆ ವಸೂಲಾತಿ ಏಜೆಂಟರರ ವರ್ತನೆ, ದಾಷ್ಟ್ಯತನದ ಬಗೆಗೆ ಪದೇ ಪದೆ ದೂರುಗಳು ಕೇಳಿಬರುತ್ತಿರುತ್ತವೆ. ಕೆಲವೊಂದು ಸಂದರ್ಭಗಳಲ್ಲಿ ಏಜೆಂಟ ರರು ಅತಿರೇಕದ ವರ್ತನೆ ತೋರುವುದು ನಿಜವಾದರೂ ಬಹುತೇಕ ಪ್ರಕರಣಗಳಲ್ಲಿ ಅವರು ತಮ್ಮನ್ನು ಕೆಲಸಕ್ಕೆ ನೇಮಿಸಿಕೊಂಡ ಸಂಸ್ಥೆಗಳು ತಮಗೆ ವಹಿಸಿದ ಕರ್ತವ್ಯವನ್ನು ನಿಭಾಯಿಸುತ್ತಿರುತ್ತಾರೆ ಅಷ್ಟೆ.

ಇತ್ತೀಚೆಗೆ ಒಂದು ಪ್ರಕರಣದಲ್ಲಿ, ವ್ಯಕ್ತಿಯೊಬ್ಬ ಒಂದು ಖಾಸಗಿ ಹಣಕಾಸು ಸಂಸ್ಥೆಯಲ್ಲಿ 6.21 ಲಕ್ಷ ರೂ. ವಾಹನ ಸಾಲ ಪಡೆದಿದ್ದ. ಆತ ನಾಲ್ಕು ವರ್ಷಗಳ ಕಾಲ ಪ್ರತೀ ತಿಂಗಳು 17,800 ರೂ. ಇಎಂಐ ಪಾವತಿಸಬೇಕಾಗಿತ್ತು. ಮರುಪಾವತಿ ಸರಿಯಾಗಿ ಮಾಡದಿದ್ದಾಗ ವಸೂಲಿ ಏಜೆಂಟರು ಪದೇ ಪದೆ ಫೋನಾಯಿಸಿ ಮರುಪಾವತಿಗೆ ಒತ್ತಾಯಿಸಿದರೆಂದು ಆತ ಆತ್ಮಹತ್ಯೆ ಮಾಡಿಕೊಂಡಿದ್ದನು.

ಅವನ ಆತ್ಮಹತ್ಯೆಗೆ ವಸೂಲಿ ಏಜೆಂಟರ ಒತ್ತಡ ಮತ್ತು ಪ್ರಚೋದನೆಯೇ ಕಾರಣ ಎಂದು ಆರೋಪಿಸಿ, ಐಪಿಸಿ ಸೆಕ್ಷನ್‌ 306ರ ಅಡಿಯಲ್ಲಿ ಎಫ್ಐಆರ್‌ ದಾಖಲಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು, ಆತ್ಮಹತ್ಯೆ ಮಾಡಿಕೊಂಡಿದ್ದ ವ್ಯಕ್ತಿಗೆ ಹಣಕಾಸು ಸಂಸ್ಥೆ ನೀಡಿದ ಸಾಲವನ್ನು ವಸೂಲು ಮಾಡಿಕೊಳ್ಳಲು ಸಂಸ್ಥೆಯಿಂದ ನೇಮಕಗೊಂಡ ಸಿಬಂದಿ ಮುಂದಾಗಿದ್ದನು. ಇಲ್ಲಿ ಹಣಕಾಸು ಸಂಸ್ಥೆಯ ಸಿಬಂದಿ ತನಗೆ ನಿರ್ದೇಶಿಸಿದ ಕರ್ತವ್ಯ ಮಾಡಿದ್ದಾನೆಯೇ ವಿನಾ ಆತ್ಮಹತ್ಯೆಗೆ ಪ್ರಚೋದಿಸಿದ್ದಾನೆ ಎನ್ನಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿತು.

ಸಾಲ ಬಾಕಿ ಇರಿಸಿಕೊಂಡಿರುವ ಸಾಲಗಾರನ ಬಳಿ ಸಾಲ ಮರು ಪಾವತಿಸುವಂತೆ ಕೇಳುವುದನ್ನು ಆತ್ಮ ಹತ್ಯೆಗೆ ಪ್ರಚೋದನೆ ಎನ್ನುವುದು ಸರಿಯಲ್ಲ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಅಭಿಪ್ರಾಯ ಪಟ್ಟಿದೆ. ಸಾಲಗಾರನು ಬಾಕಿದಾರ ನಾಗಿದ್ದು, ಸಂಸ್ಥೆಯ ಸಾಲ ಮರು ಪಾವತಿಗೆ ಕೇಳಿರುವುದು ಕ್ರಮಬದ್ಧ ವಾಗಿದೆ ಎಂದೂ ನ್ಯಾಯಾಲಯ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿತ್ತು.

Advertisement

ಹಲ್ಲೆ ನಡೆಸುವಂತಿಲ್ಲ
ಸಾಲ ವಸೂಲಾತಿ ಪ್ರಕ್ರಿಯೆಯು ಹಲವು ಕಟ್ಟುಪಾಡು ಮತ್ತು ನಿಬಂಧನೆಗಳಿಗೆ ಒಳಪಟ್ಟಿರುತ್ತದೆ. ಸಾಲ ವಸೂಲಾತಿ ಸಂದರ್ಭದಲ್ಲಿ ಏಜೆಂಟರು ಮೀಟರ್‌ ಬಡ್ಡಿ ವಸೂಲಿದಾರರ ಮಾರ್ಗವನ್ನು ಅನುಸರಿಸುವಂತಿಲ್ಲ. ಸಾಲ ವಸೂಲಾತಿಗೆ ಹೋದಾಗ ಸಾಲಗಾರರ ಮೇಲೆ ದೈಹಿಕ ಹಲ್ಲೆ ನಡೆಸುವಂತಿಲ್ಲ. ಮೂರನೇ ವ್ಯಕ್ತಿಯ ಎದುರು ಅವರ ಗೌರವಕ್ಕೆ ಕುಂದು ಬರುವಂತೆ ನಡೆದುಕೊಳ್ಳುವ ಹಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next