Advertisement

ಕಾಂಗ್ರೆಸ್ ಕೈಯಲ್ಲಿಏನೂ ಇಲ್ಲ ಹೀಗಾಗಿ ದೂರು ಕೊಡುತ್ತಿದೆ : ಆರಗ ಜ್ಞಾನೇಂದ್ರ

12:37 PM Apr 09, 2022 | Team Udayavani |

ಬೆಂಗಳೂರು : ಈಗ ಕಾಂಗ್ರೆಸ್ ಕೈಯಲ್ಲಿ ಏನೂ ಇಲ್ಲ, ಹೀಗಾಗಿ ಬರೀ ದೂರು ಕೊಡುತ್ತಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವ್ಯಂಗ್ಯವಾಡಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಎಮರ್ಜೆನ್ಸಿ ಕಾಲದಲ್ಲಿ ನಮ್ಮನ್ನ ಜೈಲಿನಲ್ಲಿ ಇಟ್ಟಿದ್ದರು, ಜಾರ್ಜ್ ಫರ್ನಾಂಡಿಸ್,  ವಾಜಪೇಯಿ ಸೇರಿದಂತೆ ದೇಶವನ್ನೇ ಜೈಲಿನಲ್ಲಿ ಇಟ್ಟಿದ್ದರು. ಅವರು ದೂರು ಕೊಡಲಿ, ಕಾನೂನು ಪ್ರಕಾರ ಕ್ರಮ ಆಗಲಿ ಎಂದರು.

ನಿನ್ನೆ ಹುಸಿ ಬಾಂಬ್ ಕರೆ ಮಾಡಿದ್ದಾರೆ. ಸೆಂಟ್ರಲ್ ಏಜೆನ್ಸಿ ಗಂಭೀರವಾಗಿ ತನಿಖೆ ಮಾಡುತ್ತಿದೆ. ಮುಳಬಾಗಿಲಿನಲ್ಲಿ ಶೋಭಾಯಾತ್ರೆ ನಡೆಯುವಾಗ ಕಲ್ಲು ತೂರಾಟ ನಡೆದಿದೆ.ಶೋಭಾಯಾತ್ರೆ ಮಾಡುವಾಗ ಕರೆಂಟ್ ಹೋಗಿದೆ.ಆ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ಕಲ್ಲು ಎಸೆದಿದ್ದಾರೆ.ಪೊಲೀಸರು ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ ಎಂದು ಹೇಳಿದರು.

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಆರೋಪಿ ಅಕೌಂಟ್ ಇಂದ ಹಣ ಪಡೆದ ಆರೋಪವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ.ಯಾರೇ ಅಧಿಕಾರಿಗಳು ಇದರ ಹಿಂದೆ ಇದ್ದರೂ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next