Advertisement

KRS ಡ್ಯಾಂನಲ್ಲಿ ನೀರಿಲ್ಲ, ನಾಲೆಗೆ ಹರಿಸುವುದಿಲ್ಲ:  ಚಲುವರಾಯ ಸ್ವಾಮಿ

12:27 AM Dec 23, 2023 | Team Udayavani |

ಶ್ರೀರಂಗಪಟ್ಟಣ: ಕೆಆರ್‌ಎಸ್‌ ಜಲಾಶಯದಿಂದ ಯಾವುದೇ ನಾಲೆಗಳಿಗೆ ನೀರು ಹರಿಸಲಾಗುವು ದಿಲ್ಲ, ಇರುವ ನೀರನ್ನು ಕುಡಿಯಲು  ಬಳಸಲಾಗುತ್ತದೆ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯ ಸ್ವಾಮಿ ತಿಳಿಸಿದರು.

Advertisement

ಕೆಆರ್‌ಎಸ್‌ನ ಕಾವೇರಿ ಸಭಾಂಗಣದಲ್ಲಿ ಕಾವೇರಿ ನೀರಾವರಿ ಸಲಹಾ ಸಮಿತಿಯ ಸಭೆಯ ಬಳಿಕ ಮಾತನಾಡಿದ ಅವರು, ಸಮಿತಿ ಮೂಲಕ ರೈತರಿಗೆ ಬೇಸಗೆ ಬೆಳೆಯನ್ನು ಬೆಳೆಯಬಾರದು ಎಂದು ಎಲ್ಲಾ ರೈತರಿಗೆ ವಿನಂತಿ ಮಾಡುತ್ತೇನೆ. ಬೆಳೆ ಬೆಳೆಸಿ ನೀರಿಲ್ಲದೆ ಯಾವ ರೈತರೂ ತೊಂದರೆಗೆ ಸಿಲುಕುವುದು ಬೇಡ.  ಆದ್ದರಿಂದ ಬೇಸಗೆಯ ಯಾವುದೇ ಬೆಳೆಗೂ ಮುಂದಾಗಬೇಡಿ ಎಂದು ಈ ಮೂಲಕ ರೈತರಿಗೆ ಮನವಿ ಮಾಡಿದರು.

ಸದ್ಯ 16 ಟಿಎಂಸಿ ನೀರಿದೆ

ಸದ್ಯದ ಪರಿಸ್ಥಿತಿಯಲ್ಲಿ ಕೆಆರ್‌ಎಸ್‌ ಜಲಾಶಯದಲ್ಲಿ ಕೇವಲ 16 ಟಿಎಂಸಿ ನೀರಿದೆ. ಅದರಲ್ಲಿ ಬೇಸಗೆಯಲ್ಲಿ 2 ರಿಂದ 3 ಟಿಎಂಸಿ ನೀರು ಆವಿಯಾಗುತ್ತದೆ. ಬಳಿಕ 13 ಟಿಎಂಸಿ ಉಳಿಯುತ್ತದೆ. ಪ್ರತಿ ತಿಂಗಳಿಗೆ 2.1 ಟಿಎಂಸಿ ನೀರು ಕುಡಿಯಲು ಹಾಗೂ ಕಾರ್ಖಾನೆಗಳಿಗೆ ಹಾಗೂ ಕಟಾವಿಗೆ ಬಂದ ಬೆಳೆಗೆ ಬೇಕಾಗುತ್ತದೆ. ಮೇ, ಜೂನ್‌ನಲ್ಲಿ ಮಳೆ ಬರದಿದ್ದರೆ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತೆ ಎಂದು ಹೇಳಿದರು.

ತಮಿಳುನಾಡಿಗೆ ನೀರಿಲ್ಲ

Advertisement

ಕಾವೇರಿ ಪ್ರಾಧಿಕಾರದ ಸೂಚನೆ ಮೇರೆಗೆ ತಮಿಳುನಾಡಿಗೆ 1 ಸಾವಿರ ಕ್ಯೂಸೆಕ್‌ ನೀರನ್ನು ಮಾತ್ರ ಹರಿಸಲಾಗುತ್ತಿದೆ. ನಮಗೆ ಕುಡಿಯಲು ನೀರಿನ ಕೊರತೆ ಇರುವಾಗ ತಮಿಳು ನಾಡಿಗೆ ನೀರು ಬಿಡುವುದು ಹೇಗೆ  ಎಂದು ಸಚಿವರು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next