Advertisement

ನಗರದಲ್ಲಿ ಇಂದಿನಿಂದ ಮೂರು ದಿನ ನೀರಿಲ್ಲ

10:20 AM May 13, 2019 | Suhan S |

ಮಹಾನಗರ, ಮೇ 12: ತುಂಬೆ ವೆಂಟೆಡ್‌ ಡ್ಯಾಂನಲ್ಲಿ ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಕಡಿಮೆ ಆಗುತ್ತಿರುವ ಹಿನ್ನೆಲೆಯಲ್ಲಿ ನಗರಕ್ಕೆ ನೀರು ಪೂರೈಕೆಗಾಗಿ ಸದ್ಯ ಜಾರಿಯಲ್ಲಿರುವ ರೇಷನಿಂಗ್‌ ನಿಯಮ ರವಿವಾರದಿಂದ ಪರಿಷ್ಕರಿ ಸಲಾಗಿದೆ.

Advertisement

ಪ್ರಸ್ತುತ ನಾಲ್ಕು ದಿನ ನೀರು ಪೂರೈಕೆ, ಎರಡು ದಿನ ಸ್ಥಗಿತ ಪ್ರಕ್ರಿಯೆ ಚಾಲ್ತಿಯಲ್ಲಿತ್ತು. ನೀರಿನ ಮಟ್ಟ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಮೇ 13ರಿಂದ ನಾಲ್ಕು ದಿನ ನೀರು ಪೂರೈಕೆ ಮತ್ತು ಮೂರು ದಿನ ನೀರು ಸರಬರಾಜು ಸ್ಥಗಿತಗೊಳಿಸಲಾಗುವುದು.

ತುಂಬೆ ಅಣೆಕಟ್ಟಿನಲ್ಲಿ ರವಿವಾರ ಬೆಳಗ್ಗೆ ನೀರಿನ ಮಟ್ಟ 3.97ಮೀ. ಇದ್ದು ನೀರು ಸಂಜೆ ವೇಳೆಗೆ 3.94 ಮೀ. ಗೆ ಇಳಿದಿದೆ. ಶನಿವಾರ ಬೆಳಗ್ಗೆ 4.12 ಮೀ. ಇದ್ದ ನೀರಿನ ಮಟ್ಟ ಸಂಜೆ ವೇಳೆಗೆ 4 ಮೀ.ಗೆ ಇಳಿದಿತ್ತು.

ಇದೇ ರೀತಿ ಮುಂದುವರಿದರೆ ನಗರಕ್ಕೆ ನೀರು ಪೂರೈಕೆ ಇನ್ನಷ್ಟು ಕಠಿನವಾಗುವ ಸಾಧ್ಯತೆ ಇದೆ. ಈ ನಡುವೆ ನಗರಕ್ಕೆ ನೀರು ಪೂರೈಕೆ ಅನಿವಾರ್ಯ ಇರುವುದರಿಂದ ರೇಷನಿಂಗ್‌ ಪರಿಷ್ಕರಣೆ ಅನಿವಾರ್ಯವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next