Advertisement

ವಾಪಸ್‌ ಬರುವ ಪ್ರಶ್ನೆಯೇ ಇಲ್ಲ: ಅತೃಪ್ತರ ದೃಢ ನುಡಿ

12:03 AM Jul 18, 2019 | Lakshmi GovindaRaj |

ಬೆಂಗಳೂರು: ರಾಜೀನಾಮೆ ಅಂಗೀಕಾರ ವಿಚಾರದಲ್ಲಿ ಸುಪ್ರೀಂಕೋರ್ಟ್‌ ನೀಡಿರುವ ತೀರ್ಪನ್ನು ನಾವು ಗೌರವಿಸುತ್ತೇವೆ. ತೀರ್ಪಿನ ಹಿನ್ನೆಲೆಯಲ್ಲಿ ನಾವು ಯಾವುದೇ ಕಾರಣಕ್ಕೂ ಅಧಿವೇಶನಕ್ಕೆ ಬರುವ ಪ್ರಶ್ನೆಯೇ ಇಲ್ಲ. ಇದು ನಮ್ಮೆಲ್ಲರ ತೀರ್ಮಾನ ಎಂದು ಅತೃಪ್ತ ಶಾಸಕರು ತಿಳಿಸಿದ್ದಾರೆ.

Advertisement

ಮುಂಬೈನಿಂದಲೇ ವಿಡಿಯೋ ಮೂಲಕ ಅವರು ಸಂದೇಶ ರವಾನಿಸಿದ್ದಾರೆ. ಅದರಲ್ಲಿ ಬಿ.ಸಿ.ಪಾಟೀಲ್‌ ಮಾತನಾಡಿ, ಸುಪ್ರೀಂಕೋರ್ಟ್‌ ತೀರ್ಪು ನಮಗೆ ತೃಪ್ತಿ ತಂದಿದೆ. ನಾವು ಸದನಕ್ಕೆ ಹಾಜರಾಗುವ ಪ್ರಶ್ನೆ ಇಲ್ಲ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ.

ಯಾವುದೇ ಕಾರಣಕ್ಕೂ ವಾಪಸ್ಸಾಗುವುದಿಲ್ಲ ಎಂದು ಹೇಳಿದ್ದಾರೆ. ಹತ್ತೂಂಬತ್ತು ಸೆಕೆಂಡ್‌ನ‌ ಈ ವಿಡಿಯೋದಲ್ಲಿ ಹೋಟೆಲ್‌ನಲ್ಲಿ ಎಲ್ಲ ಶಾಸಕರನ್ನು ಜತೆಗೆ ನಿಲ್ಲಿಸಿ ರೆಕಾರ್ಡ್‌ ಮಾಡಲಾಗಿದ್ದು, ಅದನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next