Advertisement

BJPಯಲ್ಲಿ ಆರೆಸ್ಸೆಸ್‌ ಮಾತು ನಡೆಯಲ್ಲ: ಸಂಗಣ್ಣ ಕರಡಿ

10:05 PM Jul 07, 2024 | Team Udayavani |

ಕುಷ್ಟಗಿ: ಬಿಜೆಪಿಯಲ್ಲಿ ಸಾರ್ವಭೌಮತ್ವ ಇದೆ. ಆರ್‌ಎಸ್‌ಎಸ್‌ ಮಾತು ನಡೆಯಲ್ಲ. ಅಲ್ಲಿ ಪೇಜ್‌ ಪ್ರಮುಖರಿಗೆ ಮಣೆ ಹಾಕುತ್ತಿದ್ದಾರೆ. ಚುನಾವಣೆ ವೇಳೆ ಜಿಲ್ಲಾ ಸಂಘಟನೆ, ತಾಲೂಕು ಸಂಘಟನೆ ಕಾರ್ಯಕರ್ತರ ಅಭಿಪ್ರಾಯದ ಮೇರೆಗೆ ಚುನಾವಣೆಗೆ ಸ್ಪರ್ಧಿಸುವ ಅವಕಾಶವಿರುತ್ತದೆ. ಆದರೆ ಬಿಜೆಪಿಯಲ್ಲಿ ಆ ತರಹದ ವಾತಾವರಣ ಇಲ್ಲ. ಬಿಜೆಪಿಯಲ್ಲಿ ಅಭ್ಯರ್ಥಿ ಲೆಕ್ಕಕ್ಕೆ ಇಲ್ಲ, ಮೋದಿ ನೋಡಿ ಓಟ್‌ ಹಾಕುತ್ತಾರೆ ಎನ್ನುವ ಭಾವನೆ ಇದೆ ಎಂದು ಮಾಜಿ ಸಂಸದ, ಕಾಂಗ್ರೆಸ್‌ ಮುಖಂಡ ಕರಡಿ ಸಂಗಣ್ಣ ಆರೋಪಿಸಿದರು.

Advertisement

ಕುಷ್ಟಗಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಸರ್ಕಾರದ ಯೋಜನೆ ಜನರಿಗೆ ತಲುಪಿಸಿದವರನ್ನು ಬಿಜೆಪಿಯಲ್ಲಿ ಬೇಡ ಎನ್ನುತ್ತಾರೆ. ಬಿಜೆಪಿಯಲ್ಲಿ ಆರ್‌ಎಸ್‌ಎಸ್‌ ಮಾತು ನಡೆಯುವುದಿಲ್ಲ. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್‌ ಅವರ ಕೈ ಕಟ್ಟಿ ಹಾಕಿದ್ದರಿಂದಲೇ ಏಟು ತಿನ್ನಬೇಕಾಯಿತು. ಕಾಂಗ್ರೆಸ್‌ನಲ್ಲಿ ಎಲ್ಲವೂ ಚೆನ್ನಾಗಿದೆ. ನನ್ನನ್ನು ಎಂಎಲ್‌ಸಿ ಮಾಡುವ ಚಿಂತನೆ ಇದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next