Advertisement

“ಸರ್ಕಾರದಿಂದ ಯಾವುದೇ ಪರಿಹಾರ ದೊರೆತಿಲ್ಲ’

07:15 AM Aug 18, 2017 | Team Udayavani |

ಚನ್ನಪಟ್ಟಣ: ಸರ್ಕಾರದಿಂದ ತಮಗೆ ಯಾವುದೇ ಪರಿಹಾರ ದೊರೆತಿಲ್ಲ. ತಮ್ಮ ಮಗ ದಿ.ಡಿ.ಕೆ.ರವಿ ದಕ್ಷ ಜಿಲ್ಲಾಧಿಕಾರಿಯಾಗಿ ಸಮಾಜಕ್ಕೆ ಸೇವೆ ಸಲ್ಲಿಸಿದ್ದು, ಅವರ ಸಾವಿನ ಬಳಿಕ ತಮ್ಮನ್ನು ಕೋಲಾರದ ಜನತೆಯೇ ಪೋಷಣೆ ಮಾಡುತ್ತಿದೆ ಎಂದು ಡಿ.ಕೆ. ರವಿ ಅವರ ತಾಯಿ ಗೌರಮ್ಮ ವಿಷಾದಿಸಿದ್ದಾರೆ.

Advertisement

ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಹಾರೋಹಳ್ಳಿಯಲ್ಲಿ ಮಾತನಾಡಿ, “ನನ್ನ ಮಗ ಡಿ.ಕೆ.ರವಿ ಒಬ್ಬ ನಿಷ್ಠಾವಂತ, ದಕ್ಷ ಅಧಿಕಾರಿಯಾಗಿ ಸಮಾಜದ ಪಿಡುಗುಗಳನ್ನು ಹೋಗಲಾಡಿಸಲು ಹೋರಾಟ ಮಾಡಿದ್ದಾನೆ. ಅವನ ಸಾವಿನ ಬಗ್ಗೆ ಸೂಕ್ತ ತನಿಖೆಯಾಗಲಿಲ್ಲ. ಸರ್ಕಾರದಿಂದ ಯಾವುದೇ ಪರಿಹಾರವೂ ದೊರೆತಿಲ್ಲ. ಆದರೂ ಕೋಲಾರದ ಜನತೆ ನನ್ನ ಮಗನಿಗೆ ಪುತ್ಥಳಿ ನಿರ್ಮಿಸುವ ಮೂಲಕ ಗೌರವ ನೀಡಿ, ನನ್ನನ್ನು ಪೋಷಣೆ ಮಾಡುತ್ತಿದ್ದಾರೆ. ಮುಂದೆಯೂ ಮಾಡುತ್ತಾರೆ ಎನ್ನುವ ಭರವಸೆ ಇದೆ. ಸಮಾಜದಲ್ಲಿ ನಿಷ್ಠಾವಂತ ಅಧಿಕಾರಿಗಳಿಗೆ ಉಳಿಗಾಲವಿಲ್ಲ’ ಎಂದು ಕಂಬನಿ ಮಿಡಿದರು.

Advertisement

Udayavani is now on Telegram. Click here to join our channel and stay updated with the latest news.

Next