Advertisement

ಲಸಿಕೆಯಿಂದ ಅಡ್ಡ ಪರಿಣಾಮವಿಲ್ಲ

01:28 PM Jan 24, 2021 | Team Udayavani |

ಲೋಕಾಪುರ: ಕೋವಿಡ್ ಲಸಿಕೆಯಿಂದ ಯಾವುದೇ ತೊಂದರೆಯಾಗುವುದಿಲ್ಲ. ಸಾರ್ವಜನಿಕರು ಲಸಿಕೆ ಹಾಕಿಸಿಕೊಳ್ಳಲು ಭಯಪಡಬಾರದು ಎಂದು ಹಿರೇಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

Advertisement

ಕಸಬಾ ಜಂಬಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್‌ ವ್ಯಾಕ್ಸಿನ್‌ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸರ್ಕಾರ ನೀಡುತ್ತಿರುವ ಲಸಿಕೆ ಸಂಪೂರ್ಣ ಸುರಕ್ಷಿತವಾಗಿದೆ ಎಂದರು. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿ ಕಾರಿಗಳು, ಆಸ್ಪತ್ರೆ ಸಿಬ್ಬಂದಿ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ಕೋವಿಡ್ ಲಸಿಕೆಯ ಬಾಕ್ಸ್‌ಗೆ ಪೂಜೆ ಸಲ್ಲಿಸಿದರು.

ಇದನ್ನೂ ಓದಿ:ಮಕ್ಕಳ ಶಿಕ್ಕಣಕ್ಷೆ ಆದ್ಯತೆ ನೀಡಿ: ನವಲಿಹಿರೇಮಠ

ಹಿರೇಮಠದ ಶ್ರೀ ರಾಜಶೇಖರ ದೇವರು ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವೈದ್ಯಾ ಧಿಕಾರಿ ಡಾ| ಎ.ಎಫ್‌. ಗಿರಡ್ಡಿ, ಡಾ| ಎನ್‌.ಎಸ್‌. ಲಮಾಣಿ, ಎಆರ್‌ ಎಸ್‌ ಸದಸ್ಯ ಉದ್ಯಾನಂದ ಅರೆಮಠ, ಎಚ್‌.ಡಿ. ಭಗವತಿ, ಕೆ.ಬಿ. ಮಂಟೂರ, ವಿ.ಎಸ್‌. ಕಟಗೇರಿ, ಎಂ.ಎ. ಅಲ್ಲವ್ವಗೋಳ, ಎಂ.ಎಸ್‌. ಕಲಗುಡಿ, ಆನಂದ ನಲವಡೆ, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಆರೋಗ ಇಲಾಖೆ ಸಿಬ್ಬಂದಿ, ಗ್ರಾಮಸ್ಥರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next