Advertisement

“ದೇಶಕ್ಕಾಗಿ ಪ್ರಾಣ ತೆತ್ತವರ ಅವಹೇಳನ ಸಲ್ಲದು’

11:44 PM May 18, 2019 | Team Udayavani |

ಉಡುಪಿ: ಮಹಾತ್ಮ ಗಾಂಧಿ ಹಂತಕ ನಾಥೂರಾಮ್‌ ಗೋಡ್ಸೆಯ ಕುರಿತಾಗಿ ದ.ಕ. ಸಂಸದ ನಳಿನ್‌ ಕುಮಾರ್‌ ಕಟೀಲ್‌, ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ, ಬಿಜೆಪಿ ಲೋಕಸಭೆ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್‌ ಅವರು ನೀಡಿದ ಹೇಳಿಕೆ ಖಂಡಿಸಿ ಜಿಲ್ಲಾ ಕಾಂಗ್ರೆಸ್‌ ಸಮಿತಿ ಕಾಂಗ್ರೆಸ್‌ ಭವನದ ಎದುರು ಶನಿವಾರ ಪ್ರತಿಭಟನೆ ನಡೆಸಿತು.

Advertisement

ಕರ್ನಾಟಕ ಪ್ರದೇಶ್‌ ಕಾಂಗ್ರೆಸ್‌ ಪ್ರ. ಕಾರ್ಯದರ್ಶಿ ಎಂ.ಎ. ಗಫ‌ೂರ್‌ ಮಾತನಾಡಿ, ಬಿಜೆಪಿ ನಾಯಕರು ಮಹಾತ್ಮಾ ಗಾಂಧಿ ಹತ್ಯೆ ಹಂತಕರನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈಭವೀಕರಿಸುತ್ತಿರುವುದು ಸರಿಯಲ್ಲ. ನಳಿನ್‌ ಕುಮಾರ್‌ ಕಟೀಲು ಅವರು ದೇಶಕ್ಕಾಗಿ ಪ್ರಾಣ ತೆತ್ತ ಗಾಂಧಿ ಹಾಗೂ ರಾಜೀವ್‌ ಗಾಂಧಿ ಅವರನ್ನು ಅವಮಾನ ಮಾಡಿರುವುದು ಖಂಡನೀಯ ಎಂದರು.
ಅಲ್ಪಸಂಖ್ಯಾಕ ಘಟಕದ ಅಧ್ಯಕ್ಷ ಇಸ್ಮಾಯಿಲ್‌ ಆತ್ರಾಡಿ, ಕೆಪಿಸಿಸಿ ವೆರೋನಿಕ ಕರ್ನೇಲಿಯೊ, ಮುರಳಿ ಶೆಟ್ಟಿ, ರಾಜೀವ್‌ ಗಾಂಧಿ ಪಂಚಾಯತ್‌ ರಾಜ್‌ ಸಂಘಟನೆ ಜಿಲ್ಲಾಧ್ಯಕ್ಷೆ ರೋಶನಿ ಒಲವೇರ್‌, ಕಿಸಾನ್‌ ಘಟಕದ ಜಿಲ್ಲಾಧ್ಯಕ್ಷ ಶಶಿಧರ್‌ ಶೆಟ್ಟಿ, ವಕ್ತಾರ ಭಾಸ್ಕರ್‌ರಾವ್‌ ಕಿದಿಯೂರು, ಪದಾಧಿಕಾರಿಗಳಾದ ಪ್ರಖ್ಯಾತ್‌ ಶೆಟ್ಟಿ, ಯತೀಶ್‌ ಕರ್ಕೇರ, ಕಿಶಾನ್‌ ಹೆಗ್ಡೆ , ರಮೇಶ್‌ ಕಾಂಚನ್‌, ಡಾ| ಸುನೀತಾ, ಗಣೇಶ್‌ ನೇಗಿ, ಕುಶಾಲ್‌ ಶೆಟ್ಟಿ, ಅಶೋಕ್‌ ಕುಮಾರ್‌ ಕೊಡವೂರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next