Advertisement

ಕಾಂಗ್ರೆಸ್‌ಗೂ ಪ್ರಜಾಪ್ರಭುತ್ವಕ್ಕೂ ಸಂಬಂಧವೇ ಇಲ್ಲ;ಮೋದಿ 

02:46 PM May 09, 2018 | |

ಚಿಕ್ಕಮಗಳೂರು: ‘ಕಾಂಗ್ರೆಸ್‌ ಪಕ್ಷಕ್ಕೂ, ಪ್ರಜಾಪ್ರಭುತ್ವಕ್ಕೂ ಸಂಬಂಧವೇ ಇಲ್ಲ. ಕಾಂಗ್ರೆಸ್‌ ನಲ್ಲಿ ಎಲ್ಲವೂ ಒಂದು ಕುಟುಂಬದ್ದು, ಆ ಕುಟುಂಬಕ್ಕೆ ಹಿರಿಯ ನಾಯಕರದ್ದಾಗಲಿ, ದೇಶದ ಜನರದ್ದಾಗಲಿ ಚಿಂತೇ ಇಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿ ಕಾರಿದ್ದಾರೆ. 

Advertisement

ಚಿಕ್ಕಮಗಳೂರಿನಲ್ಲಿ ಬುಧವಾರ ಮಧ್ಯಾಹ್ನ ನಡೆದ ಬೃಹತ್‌ ಬಿಜೆಪಿ ಚುನಾವಣಾ ಸಭೆಯನ್ನುದ್ದೇಶಿಸಿ ಮಾತನಾಡಿದರು. 

ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ ಮೋದಿ ಮೊದಲು ಶೃಂಗೇರಿ ಶಾರಾದಾಂಬೆ, ಹೊರನಾಡು ಅನ್ನಪೂರ್ಣೇಶ್ವರಿ,ಶೃಂಗೇರಿ ಶ್ರೀ, ರಂಭಾಪುರಿ ಶ್ರೀ,ಗುರು ದತ್ತಾತ್ರೇಯರನ್ನು ಸ್ಮರಿಸಿದರು. 

‘ಕಾಂಗ್ರೆಸ್‌ ಧೂಳಿಪಟವಾದ ಸಂದರ್ಭ ಇಂದಿರಾ ಗಾಂಧಿ ಇಲ್ಲಿಗೆ ಬಂದು ನಿಮ್ಮ ಕಣ್ಣಲ್ಲಿ ಮಣ್ಣೆರಚಿ ಗೆದ್ದು ಹೋದರು. ಗೆದ್ದು ದೆಹಲಿಗೆ ಹೋದ ಬಳಿಕ ಮತ್ತೆ ಮರಳಿದ್ದರೇ’ ಎಂದು ಪ್ರಶ್ನಿಸಿದರು. 

‘ಅವರ ಸೊಸೆ ಸೋನಿಯಾ ಗಾಂಧಿ ಬಳ್ಳಾರಿಗೆ ಬಂದು ಕಣ್ಣೀರಿಟ್ಟರು. 300 ಕೋಟಿ ರೂಪಾಯಿ ಪ್ಯಾಕೇಜ್‌ ಘೋಷಿಸಿ ಗೆದ್ದರು. ಆ ಪ್ಯಾಕೇಜ್‌ ಏನಾಗಿದೆ’ ಎಂದು ಪ್ರಶ್ನಿಸಿದರು. 

Advertisement

‘ಕಾಂಗ್ರೆಸ್‌ ಎಲ್ಲಾ ಕಡೆ ಸೋತರೂ ಇವಿಎಂಗಳ ಮೇಲೆ ಹೊಣೆ ಹೊರಿಸಿದರು. ಸಿಎಜಿ , ಸಿಬಿಐ ಇ ಡಿ,ಚನಾವಣಾ ಆಯೋಗ ಯೂವುದು ಸರಿಯಿಲ್ಲ ಎನ್ನುತ್ತಾರೆ . ಅದಿರಲಿ ಸರ್ಜಿಕಲ್‌ ಸ್ಟ್ರೈಕ್‌ ಮಾಡಿದ ಸೈನಿಕರಿಗೂ ಅಪಮಾನ ಮಾಡಿದರು.ಕಾಂಗ್ರೆಸ್‌ ಮಾತ್ರ ಸರಿಯಿದೆ ಎನ್ನುವ ಅಹಂಕಾರ ಅವರದ್ದು’  ಎಂದರು. 

‘ದೇಶದ ಎಲ್ಲಾ ರಾಜ್ಯಗಳಲ್ಲಿ ಕಾಂಗ್ರೆಸ್‌ ಹೀನಾಯವಾಗಿ ಸೋತಿದೆ . ಹೀಗಿರುವಾಗ ನಾಮ್‌ದಾರ್‌ಗೆ ಪ್ರಧಾನಿಯಾಗುವ ಕನಸು’ ಎಂದು ರಾಹುಲ್‌ ಗಾಂಧಿ ವಿರುದ್ಧ ಕಿಡಿ ಕಾರಿದರು. 

‘ಕಾಂಗ್ರೆಸ್‌ನ ತಾಯಿ ಮಗ 4 ಸಾವಿರ ಕೋಟಿ ರೂಪಾಯಿ ಹಗರಣದಲ್ಲಿ ಜಾಮೀನು ಪಡೆದಿದ್ದಾರೆ. ಅವರು  ದೇಶಕ್ಕೆ ಪ್ರಾಮಾಣಿಕತೆಯ ಪಾಠ ಮಾಡುತ್ತಿದ್ದಾರೆ’ ಎಂದು ಕಿಡಿ ಕಾರಿದರು. 

Advertisement

Udayavani is now on Telegram. Click here to join our channel and stay updated with the latest news.

Next