Advertisement

ಮದ್ವೆ ಆದ್ರೂ “ಪ್ರಸ್ಥ’ಇಲ್ಲ!

11:34 PM Feb 18, 2020 | Lakshmi GovindaRaj |

ವಿಧಾನ ಪರಿಷತ್ತು: “ಮುಖ್ಯಮಂತ್ರಿ ಯಡಿಯೂರಪ್ಪನವರ ಮದುವೆಯೇನೋ ಆಗಿದೆ. ಆದರೆ, ಪ್ರಸ್ಥ ಮಾಡಲು ಯಾರೂ ಬಿಡುತ್ತಿಲ್ಲ…!’ ಒಂದೆಡೆ ಸರ್ಕಾರ ರಚನೆ ಕಸರತ್ತು, ಮತ್ತೂಂದೆಡೆ ಸಚಿವ ಸಂಪುಟ ರಚನೆ ಸರ್ಕಸ್‌ ಹಾಗೂ ಕೇಂದ್ರ ಸರ್ಕಾರದ ಅನುದಾನ ಕಡಿತದ ಪರಿಣಾಮಗಳನ್ನು ಕಾಂಗ್ರೆಸ್‌ ಸದಸ್ಯ ಸಿ.ಎಂ.ಇಬ್ರಾಹಿಂ ವಿಶ್ಲೇಷಿಸಿದ್ದು ಹೀಗೆ. ಈ ಹೋಲಿಕೆ ಸದನದಲ್ಲಿ ನಗೆಯ ಬುಗ್ಗೆ ಚಿಮ್ಮಿಸಿತು.

Advertisement

ಹಾಗೂ-ಹೀಗೂ ಸರ್ಕಾರ ರಚನೆ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮದುವೆ ಆದಂತಾಗಿದೆ. ಆದರೆ, ಸಂಪುಟ ರಚನೆ ಮಾಡಿ ಅಧಿಕಾರವೆಂಬ “ಪ್ರಸ್ಥ’ಕ್ಕೆ ಅವಕಾಶ ಇಲ್ಲದಂತಾಗಿದೆ. ಹುಡುಗಿ ಯಾವ ಕೊಠಡಿಯಲ್ಲಿದ್ದಾಳೆ ಎಂದು ಹುಡುಕುವಂತಾಗಿದೆ ಎಂದು ಸರ್ಕಾರದ ಕಾಲೆಳೆದ ಇಬ್ರಾಹಿಂ, ಸಂಪುಟ ರಚನೆ ಇಷ್ಟೊಂದು ದಿನ ಬೇಕಾಗಿತ್ತಾ? ಅತ್ತ ಕೇಂದ್ರ ಅನುದಾನಕ್ಕೆ ಕತ್ತರಿ ಹಾಕುತ್ತಿದೆ. ಹಾಗಿದ್ದರೆ, ಯಡಿಯೂರಪ್ಪ ಸಿಎಂ ಆಗಿದ್ದೇ ತಪ್ಪಾ ಎಂದು ಕೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next