Advertisement

ರೆಡ್ಡಿ ಬಂಧನದಲ್ಲಿ ರಾಜಕೀಯ ಷಡ್ಯಂತ್ರವಿಲ್ಲ: ಡಾ. ಶರವಣ

06:35 AM Nov 12, 2018 | |

ಹುಬ್ಬಳ್ಳಿ: ನ್ಯಾಯಾಂಗಕ್ಕಿಂತ ದೊಡ್ಡವರ್ಯಾರೂ ಇಲ್ಲ. ಜನಾರ್ದನ ರೆಡ್ಡಿ ವಿಚಾರದಲ್ಲಿ ಇದು ಸಾಬೀತಾಗಿದೆ. ಸಿಸಿಬಿ ಅಧಿಕಾರಿಗಳು ಸೂಕ್ತ ಸಾಕ್ಷ್ಯಾಧಾರ ಹಾಗೂ ದೂರುಗಳ ಮೇಲೆಯೇ ಅವರನ್ನು ಬಂಧಿಸಿದ್ದಾರೆ. ಈ ವಿಷಯದಲ್ಲಿ ಯಾವುದೇ ರಾಜಕೀಯ ಷಡ್ಯಂತ್ರವಿಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಡಾ. ಟಿ.ಎ.ಶರವಣ ಹೇಳಿದರು. 

Advertisement

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ರೆಡ್ಡಿ ಕಾರಾಗೃಹಕ್ಕೆ ಹೋಗಿ ಬಂದಿದ್ದರು. ನಂತರವಾದರೂ ಅವರು ಎಚ್ಚೆತ್ತುಕೊಳ್ಳಬೇಕಿತ್ತು. ಅವರು ಇಂತಹ ಅಕ್ರಮ ಕೆಲಸಕ್ಕೆ ಕೈ ಹಾಕಬಾರದಿತ್ತು. ಆ್ಯಂಬಿಡೆಂಟ್‌ ಕಂಪನಿ ಜನಸಾಮಾನ್ಯರಿಗೆ ಬಹಳಷ್ಟು ವಂಚನೆ ಮಾಡಿತ್ತು. ಮೋಸಕ್ಕೊಳಗಾದವರು ಈ ಕುರಿತು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರ ಗಮನಕ್ಕೆ ತಂದಿದ್ದರು. ಅಲ್ಲದೆ ಸಿಸಿಬಿಗೆ ದೂರುಗಳು ಬಂದಿದ್ದವು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next