Advertisement

ಕೃಷಿಯೋಗ್ಯವಲ್ಲದ  ಪರಿಸರವೇ ಇಲ್ಲ : ರಾಜಾರಾಂ ಶೆಟ್ಟಿ

03:50 AM Jul 04, 2017 | Team Udayavani |

ಮರೋಳಿ:  ನಮ್ಮ ಸುತ್ತಮುತ್ತ ಸಹಸ್ರಾರು ಜೀವರಾಶಿಗಳು ಬದುಕಿ ಬಾಳುತ್ತಿವೆ. ಅವುಗಳಿಗೆಲ್ಲ ಸಸ್ಯಸಂಪತ್ತೇ ಜೀವನಾಧಾರ.  ಕೃಷಿಯ ಮೂಲಕ ಈ ಸಂಪತ್ತನ್ನು ಉಳಿಸಿ ಬೆಳೆಸುವುದು ನಮ್ಮ ಆದ್ಯ ಕರ್ತವ್ಯವಾಗಬೇಕು. ಅದಕ್ಕಾಗಿ ಹೊಲ-ಗದ್ದೆಗಳೇ ಬೇಕೆಂದಿಲ್ಲ. ಏಕೆಂದರೆ,  ಕೃಷಿಯೋಗ್ಯವಲ್ಲದ ಪರಿಸರವೇ ಇಲ್ಲ ಎಂದು  ಕೋಲ್ಕ ತಾದ ಸಾಲ್ಬೋನಿ ಭಾರತೀಯ ರಿಸರ್ವ್‌ ಬ್ಯಾಂಕ್‌ ನೋಟ್‌ ಪ್ರಸ್‌ನ ಉಪ ಮಹಾಪ್ರಬಂಧಕ ಮನವಳಿಕೆಗುತ್ತು ರಾಜಾರಾಮ ಶೆಟ್ಟಿ ಹೇಳಿದ್ದಾರೆ. 

Advertisement

ಅವರು ಮಂಗಳೂರಿನ ಮರೋಳಿ ಲಾಲ್‌ಬಹದ್ದೂರ್‌ ಶಾಸ್ತ್ರಿ ಬಡಾವಣೆ ಯಲ್ಲಿ ಪಡ್ಡಂಬೈಲ್‌  ಕೃಷ್ಣಪ್ಪ ಗೌಡರು ನಿರ್ಮಿಸಿದ ತಾರಸಿ ತೋಟಕ್ಕೆ ಭೇಟಿ ನೀಡಿದರು. ಪ್ರಾಧ್ಯಾಪಕ ಭಾಸ್ಕರ  ರೈ ಕುಕ್ಕುವಳ್ಳಿ ಮಾತನಾಡಿ,  ನಮ್ಮ ಭೂಮಿ ಒಂದು ಅಕ್ಷಯ ಪಾತ್ರೆ. ಅದರಲ್ಲಿ ಏನು ಬೆಳೆದರೂ ಫಲ ಕೊಡುತ್ತದೆ. ಮನೆಯ ತಾರಸಿಯ ಮೇಲೆ ಸೊಪ್ಪು ತರಕಾರಿ, ಹೂ  ಹಣ್ಣು, ದವಸ ಧಾನ್ಯ ಮತ್ತು ಔಷಧೀಯ ಸಸ್ಯಗಳನ್ನು ಬೆಳೆಸುವ ಮೂಲಕ ಕೃಷ್ಣಪ್ಪ ಗೌಡ ಅವರು  ಕಾಂಕ್ರೀಟ್‌ ಕಾಡಿನಲ್ಲಿ ಹಸಿರುಕ್ರಾಂತಿ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ ಎಂದರು. 

ಸಾಹಿತಿ ಕೆ.ಲಕ್ಷ್ಮೀ ನಾರಾಯಣ ರೈ ಹರೇಕಳ ಅಭಿನಂದಿಸಿದರು.  ಕೃಷ್ಣಪ್ಪ ಗೌಡ ಸ್ವಾಗತಿಸಿದರು. ಮೀನಾಕ್ಷಿ ಕೆ. ಗೌಡ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next