Advertisement

ಹನಗಂಡಿ ಕೆರೆಯಲ್ಲಿ ಹನಿ ನೀರಿಲ್ಲ..!

08:26 AM Jul 12, 2019 | Suhan S |

ಬನಹಟ್ಟಿ; ಹೆಚ್ಚಿನ ಪ್ರಮಾಣದ ಮಳೆ ಬಾರದ ಕಾರಣ ತಾಲೂಕಿನ ಅನೇಕ ಕೆರೆಗಳು ನೀರಿಲ್ಲದೇ ಖಾಲಿಯಾಗಿ ಗೋಚರಿಸುತ್ತಿವೆ. ಕೇವಲ ಜಿಟಿ ಜಿಟಿ ತುಂತುರು ಮಳೆ ಮಾತ್ರ ಸುರಿಯುತ್ತಿದ್ದು, ಮೋಡಗಳು ಹೀಗೆ ಬಂದು ಹಾಗೇ ಮಾಯವಾಗುತ್ತಿವೆ.

Advertisement

ಸಮೀಪದ ಹನಗಂಡಿ ಗ್ರಾಮದ ಜೀವಜಲ ವಿಶಾಲ ಕೆರೆ ಜುಲೈ ತಿಂಗಳು ಮುಗಿಯುತ್ತ ಬಂದರೂ ಕೆರೆಗೆ ಒಂದು ಹನಿ ನೀರು ಕೂಡಾ ಬಂದಿಲ್ಲ. ಹೀಗಾಗಿ ಕೆರೆ ಬಣಗುಡುತ್ತಿದೆ. ಈ ಕೆರೆ ತುಂಬಿದರೆ ಗ್ರಾಮದ ಅನೇಕ ಕೊಳವೆ ಬಾವಿಗಳು, ತೆರೆದ ಬಾವಿಗಳಲ್ಲಿ ಅಂತರ್ಜಲ ಹೆಚ್ಚಾಗಿ ನೀರಿನ ಕೊರತೆಯನ್ನು ನೀಗಿಸುತ್ತದೆ. ಈ ಹಿಂದೆ ಕೆರೆ ತುಂಬಾ ಹೂಳು ತುಂಬಿಕೊಂಡಿತ್ತು.ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಪಂದವರು ಹೂಳು ತೆಗೆಯಿಸಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗುವಂತೆ ಮಾಡಿದ್ದಾರೆ. ಆದರೆ ಹೆಚ್ಚಿನ ಪ್ರಮಾಣ ಮಳೆಯಾಗದ ಕಾರಣ ಕೆ‌ರೆಗೆ ಹನಿ ನೀರೂ ಹರಿದು ಬಂದಿಲ್ಲ. ಇದರಿಂದ ಈ ಭಾಗದ ರೈತರ ಹೊಲ ಗದ್ದೆಗಳಲ್ಲಿನ ಬೋರವೆಲ್ಗಳಲ್ಲಿ ನೀರಿಲ್ಲದೆ, ಸಮಯಕ್ಕೆ ಸರಿಯಾಗಿ ಮಳೆಯೂ ಬಾರದೇ ಮುಂಗಾರು ಬೆಳೆಗಳಾದ ಮೆಕ್ಕೆಜೋಳ, ಕಬ್ಬು, ತೊಗರಿ ಬೆಳೆ, ಹೆಸರು, ಕಾಯಿಪಲ್ಲೆ ಬೆಳೆಗಳು ಸಂಪೂರ್ಣ ಒಣಗಲು ಆರಂಭಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next