Advertisement

ಗಡಿಭಾಗದಲ್ಲಿ ಭಾಷಾ ಸಾಮರಸ್ಯ ಇದೆ

04:30 PM Dec 02, 2019 | Team Udayavani |

ಬಂಗಾರಪೇಟೆ: ಕನ್ನಡ ನಾಡು, ಸಾಂಸ್ಕೃತಿಕ, ಸಾಹಿತ್ಯಿಕ, ವೈಜ್ಞಾನಿಕವಾಗಿತನ್ನದೇ ಆದ ವೈವಿಧ್ಯತೆ ಪಡೆಯುವ ಮೂಲಕ ಸಾಮರಸ್ಯದ ಬೀಡಾಗಿದೆ ಎಂದು ನಿವೃತ್ತ ಮುಖ್ಯಶಿಕ್ಷಕ ಎಂ.ಹನುಮಪ್ಪ ಹೇಳಿದರು.

Advertisement

ತಾಲೂಕಿನ ತಾಲೂಕಿನ ಮಾದಮಂಗಲ ಗ್ರಾಮದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಲ್ಲಿ ಸಾಮಾಜಿಕ,ಧಾರ್ಮಿಕ ಹಾಗೂ ಶೈಕ್ಷಣಿಕವಾಗಿ ಹಲವುಭಾಷೆ, ಸಂಸ್ಕೃತಿಗಳು ಸಮ್ಮಿಳಿತ ಗೊಂಡಿದ್ದರೂ ಕನ್ನಡವು ತನ್ನ ಕಂಪನ್ನುಇಂದಿಗೂ ಉಳಿಸಿಕೊಂಡಿದೆ. ಕನ್ನಡನಾಡಿನ ಪ್ರತಿಯೊಬ್ಬ ಪ್ರಜೆಯೂ ಭಾಷೆಯನ್ನು ತಮ್ಮ ಉಸಿರು ಇರುವವರೆಗೆ ತಂದೆ, ತಾಯಿ, ಗುರುವಿನಂತೆ ಪ್ರೀತಿಸಿದ್ದಲ್ಲಿ ಇತರೆ ಭಾಷೆಗಳ ಪ್ರಭಾವದಿಂದಕನ್ನಡ ಉಳಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಎಲ್ಲಿಯ ತನಕ ನಾವು ಕನ್ನಡವನ್ನುಬಳಸುತ್ತೇವೆಯೋ ಅಲ್ಲಿಯವರೆಗೆ ಅದುಜೀವಂತವಾಗಿ ಉಳಿಯಲು ಸಾಧ್ಯ. ಕರ್ನಾಟಕದ ಗತಕಾಲದ ಭವ್ಯ ಪರಂಪರೆಯ ಇತಿಹಾಸವನ್ನು ನಾಟಕ,ಕಥೆ, ಕಾದಂಬರಿಗಳ ಮೂಲಕ ವ್ಯಕ್ತಪಡಿಸಿ, ಜನರಲ್ಲಿ ಭಾಷಾಭಿಮಾನಮೂಡಿಸಬೇಕು ಎಂದು ನುಡಿದ ಅವರು, ಕನ್ನಡಿಗರು ಬೇರೆ ಭಾಷೆಗಳ ವ್ಯಾಮೋಹದಿಂದ ಹೊರಬಂದು ಭಾಷಾಅಭಿವೃದ್ಧಿಗಾಗಿ ಶ್ರಮಿಸಬೇಕೆಂದು ಸಲಹೆ ನೀಡಿದರು.

ಬಂಗಾರಪೇಟೆ ತಾಲೂಕು ರಾಜ್ಯದ ಗಡಿ ಭಾಗದಲ್ಲಿದ್ದರೂ ಭಾಷಾ ಸಾಮರಸ್ಯಕ್ಕೆ ಹೆಸರುವಾಸಿಯಾಗಿದೆ. ಕುಡಿಯುವ ನೀರಿಗೆ ಬರ ಎದುರಿಸುತ್ತಿದ್ದರೂ ಕನ್ನಡ ಭಾಷೆಗೆ ಈ ತಾಲೂಕಿನಲ್ಲಿಯಾವುದೇ ರೀತಿಯ ಬರವಿಲ್ಲದೆ ಭಾಷೆ ತನ್ನ ಜೀವಂತಿಕೆ ಉಳಿಸಿಕೊಂಡಿದೆ ಎಂದರೆ ತಪ್ಪಾಗಲಾರದು ಎಂದರು. ಪುರಸಭೆ ಸದಸ್ಯ ಎಂ.ಎಂ.ಮೂರ್ತಿ, ಎಂ.ವಿ.ಮೋಹನ್‌, ರಂಜಿತ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next