Advertisement

ಪೋಷಕರನ್ನು ವೃದ್ಧಾಶ್ರಮಕ್ಕೆ ಸೇರಿಸುವ ಪ್ರವೃತ್ತಿ ಹೆಚ್ಚುತ್ತಿದೆ

05:24 PM Oct 29, 2017 | Team Udayavani |

ಶ್ರವಣಬೆಳಗೊಳ (ಸಾಮ್ರಾಟ್‌ ಚಂದ್ರಗುಪ್ತ ಮೌರ್ಯ ಸಭಾ ಮಂಟಪ): ಯುವಕರು ದುಷcಟಗಳಿಗೆ ಬಲಿಯಾಗದೆ ಜೈನ ಧರ್ಮದ ಆಚಾರ- ವಿಚಾರಗಳನ್ನು ಹಾಗೂ ದೇಶದ ಸಂಸ್ಕೃತಿಯನ್ನು ಉಳಿಸಬೇಕೆಂದು ಬೆಳಗಾವಿ ಶಾಸಕ ಸಂಜಯ್‌ ಪಾಟೀಲ್‌ ಹೇಳಿದರು.

Advertisement

ಮಹಾಮಸ್ತಕಾಭಿಷೇಕ ಮಹೋತ್ಸವ-2018ರ ಅಂಗವಾಗಿ ಶ್ರವಣಬೆಳಗೊಳದಲ್ಲಿ ಹಮ್ಮಿಕೊಂಡಿರುವ ರಾಷ್ಟ್ರ ಮಟ್ಟದ ಜೈನ ಯುವ ಸಮ್ಮೇಳನದ ಪ್ರಥಮ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇಂದು ಅವಿಭಕ್ತ ಕುಟುಂಬಗಳು ಕಣ್ಮರೆಯಾಗುತ್ತಿದ್ದು. ಸಂಬಂಧಗಳ ಕೊಂಡಿ ಕಳಚುತ್ತಿವೆ. ಹಿಂದೆ ಒಟ್ಟು ಕುಟುಂಬಗಳಿದ್ದವು. ಇಂದು ಚಿಕ್ಕ ಕುಟುಂಬಗಳಾಗುತ್ತಿವೆ.

ತಂದೆ- ತಾಯಿಯರನ್ನು ವೃದ್ಧಾಶ್ರಮಕ್ಕೆ ಕಳುಹಿಸುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು. ತಂದೆ- ತಾಯಿಯರನ್ನು ವೃದ್ಧಾಶ್ರಮಕ್ಕೆ ಸೇರಿಸಿದರೆ ಅವರ ಮಕ್ಕಳೂ ಅವರನ್ನು ವೃದ್ಧಾಶ್ರಮಕ್ಕೆ ಕಳುಹಿಸುತ್ತಾರೆ. ಯಾವುದಾದರೂ ಕಾರ್ಯಕ್ರಮಕ್ಕೆ ಪತಿ ಪತ್ನಿ, ಮಕ್ಕಳನ್ನು ಬಿಟ್ಟರೆ ಮನೆಯ ಹಿರಿಯರನ್ನು ಕರೆದೊಯ್ಯುತ್ತಿಲ್ಲ ಎಂದು ವಿಷಾದಿಸಿದರು.

ಗೋಷ್ಠಿಗಳ ವಿವರ: ಗೋಷ್ಠಿಯಲ್ಲಿ ವೃತ್ತಿ ಮಾರ್ಗದರ್ಶನ ಕುರಿತು ಗಾಜಿಯಾಬಾದ್‌ನ ರಿತೇಶ್‌ ಜೈನ್‌ ಮಾತನಾಡಿ, ಪೋಷಕರು ಮಕ್ಕಳ ಮೇಲೆ ಒತ್ತಡ ಹೇರದೆ ಅವರ ಆಸಕ್ತಿ ಇರುವ ಕ್ಷೇತ್ರದಲ್ಲಿ ಶಿಕ್ಷಣ ನೀಡಬೇಕು. ಮೂರ್ತಿ ಕೆತ್ತುವ ಶಿಲ್ಪಿ ತಮ್ಮ ಮನಸ್ಸಿನಲ್ಲಿ ಆಲೋಚಿಸುವಂತೆ ಮುಂದೆ ತಮ್ಮ ಮಕ್ಕಳ ಭವಿಷ್ಯ ಯಾವ ರೀತಿ ರೂಢಿಸಿಗೊಳ್ಳಬೇಕೆಂಬುದನ್ನು ನಿರ್ಧರಿಸಬೇಕೆಂದರು.

ಭೂಪಾಲ್‌ ನಿತಿನ್‌ ನಂದಗಾಂವ್ಕರ್‌ ಆಡಳಿತಾತ್ಮಕ ಸೇವೆಗಳು ಮತ್ತು ಯುವ ಜನತೆ ಕುರಿತು ಮಾತನಾಡಿ, ಜೀವನದಲ್ಲಿ ಸ್ಪಷ್ಟ ಗುರಿ ಇರಬೇಕು. ಹಾಗಾದಲ್ಲಿ ಮಾತ್ರ ಯಾವುದೇ ವ್ಯಕ್ತಿ ಯಶಸ್ಸು ಗಳಿಸಬಹುದು. ಶಿಸ್ತುಬದ್ಧ ಜೀವನ ರೂಢಿಸಿಕೊಳ್ಳಬೇಕು. ಆತ್ಮ ವಿಶ್ವಾಸವಿದ್ದರೆ ಯಾವುದೇ ಕ್ಷೇತ್ರದಲ್ಲೂ ಸಾಧನೆಗೈಯಬಹುದು ಎಂದರು.

Advertisement

ಜೈಪುರದ ಎಸ್‌.ಪಿ. ಭಾರಿಲ್ಲಾ ಭಾವನೆಗಳ ಪರಿಣಾಮ ಏನಾಗಬಹುದು ಎಂಬುದರ ಕುರಿತು ಮಾತನಾಡಿ, ಮನುಷ್ಯ ಮೊದಲು ನಿರ್ಣಯ ತೆಗೆದುಕೊಂಡು ನಂತರ ಯೋಚನೆ ಮಾಡುತ್ತಾನೆ. ಯಾವುದೇ ತೀರ್ಮಾನ ತೆಗೆದುಕೊಳ್ಳುವ ಮುಂಚಿತವಾಗಿ ಸೂಕ್ಷ್ಮವಾಗಿ ಅವಲೋಕಿಸಬೇಕು. ಮನುಷ್ಯ ತಾನು ಅಮರ ಎಂದು ತಿಳಿದು ಜೀವಿಸುತ್ತಿದ್ದು, ಅದು ತಪ್ಪು ನಿರ್ಣಯ ಎಂದರು.

ಇಂದೋರ್‌ನ ಸೌರಭ್‌ ಶಾಸಿ ಕ್ಷಮೆಯ ಶಕ್ತಿ ಕುರಿತು ವಿಷಯ ಮಾತನಾಡಿ, ಯಾವುದೇ ವ್ಯಕ್ತಿ ಉತ್ತಮ ಆಲೋಚನೆ ಹೊಂದಿರಬೇಕು. ನಮ್ಮ ಕ್ರಿಯೆಗಳಿಗಿಂತ ಭಾವನೆಗಳಿಗೆ ಹೆಚ್ಚು ಮಹತ್ವವಿದೆ ಎಂದರು. ಗೋಷ್ಠಿಯ ಸಾನ್ನಿಧ್ಯವನ್ನು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ವಹಿಸಿದ್ದರು.

ಮಹಾಮಸ್ತಕಾಭಿಷೇಕ ಮಹೋತ್ಸವದ ರಾಷ್ಟ್ರೀಯ ಸಮಿತಿಯ ಕಾರ್ಯದರ್ಶಿ ಸತೀಶ್‌ ಚಂದ್‌ ಜೈನ್‌, ಸಮ್ಮೇಳನದ ಉಸ್ತುವಾರಿ ಹಾಗೂ ಕಾರ್ಯದರ್ಶಿ ವಿನೋದ್‌ ದೊಡ್ಡಣ್ಣನವರ್‌, ರಾಷ್ಟ್ರೀಯ ಜೈನ ಯುವ ಸಮ್ಮೇಳನದ ಉಪ ಸಮಿತಿ ಅಧ್ಯಕ್ಷ ಪ್ರದೀಪ್‌ ಕುಮಾರ್‌ ಸಿಂಹ ಕಾಸ್ಲಿವಾಲ್‌, ಮುಖ್ಯ ಸಂಯೋಜಕ ಹಸುಖ್‌ ಜೈನ್‌ ಗಾಂಧಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next