Advertisement

ನಾನು ಯಾವ ಬಣದಲ್ಲೂ ಇಲ್ಲ, ಬಿಜೆಪಿಯಲ್ಲಿ ಬಣಗಳೇ ಇಲ್ಲ;ಆರ್‌.ಅಶೋಕ್‌

11:56 AM Apr 30, 2017 | Team Udayavani |

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಬಿ.ಎಸ್‌.ಯಡಿಯೂರಪ್ಪ ಮತ್ತು ಕೆ.ಎಸ್‌.ಈಶ್ವರಪ್ಪ ನಡುವಿನ ಭಿನ್ನಮತ ವೈಯಕ್ತಿಕ, ನಾನು ಯಾರ ಬಣವನ್ನೂ ಬೆಂಬಲಿಸಿಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಆರ್‌.ಅಶೋಕ್‌ ಹೇಳಿದ್ದಾರೆ.

Advertisement

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿಯಲ್ಲಿ ಯಾವುದೇ ಬಣಗಳಿಲ್ಲ.  ಭಿನ್ನಮತ ವೈಯಕ್ತಿಕ ಸಣ್ಣ ವಿಚಾರ, ಶಿವಮೊಗ್ಗದ ಅಧ್ಯಕ್ಷರ ಆಯ್ಕೆ ವಿಚಾರ, ಅಲ್ಲಿನ ಟಿಕೆಟ್‌ ವಿಚಾರ ದಲ್ಲಿ ಭಿನ್ನಮತ ಕಂಡು ಬಂದಿದೆ ಅದನ್ನು ಬಗೆ ಹರಿಸುತ್ತೇವೆ  ಎಂದರು. 

ನಾನು ಯಾರನ್ನೂ ಬೆಂಬಲಿಸುವ ಪ್ರಶ್ನೆಯೇ ಇಲ್ಲ.ಪಕ್ಷದಲ್ಲಿ ನ ಭಿನ್ನಮತ ಸರಿಯಾಗಬೇಕು ಅಷ್ಟೇ ಬೇರೆ ಏನೂ ಉದ್ದೇಶ ನಮಗಿಲ್ಲ ಎಂದರು. 

ಶಾಸಕರಾದ ಗೋವಿಂದ ಕಾರಜೋಳ, ಸುರೇಶ್‌ ಗೌಡ ಅವರೊಂದಿಗೆ ಅಶೋಕ್‌ ಅವರು ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ ರಾವ್‌ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next