Advertisement

ತೆಕ್ಕಟ್ಟೆ: ಚಲಿಸುತ್ತಿದ್ದ ಸೈಕಲ್ ಚಕ್ರಕ್ಕೆ ಸಿಲುಕಿದ ವಿದ್ಯಾರ್ಥಿನಿಯ ವೇಲ್;ತಪ್ಪಿದ ಅನಾಹುತ

11:50 AM Jul 09, 2021 | Team Udayavani |

ತೆಕ್ಕಟ್ಟೆ: ಉಳ್ತೂರಿನಿಂದ ತೆಕ್ಕಟ್ಟೆ ಕಡೆಗೆ ಪೋಷಕರೊಂದಿಗೆ ವಿದ್ಯಾರ್ಥಿನಿ ಸೈಕಲ್ ನ ಹಿಂಬದಿ ಸವಾರಳಾಗಿ ಬರುತ್ತಿರುವ ಸಂದರ್ಭದಲ್ಲಿ ಆಕಸ್ಮಿಕವಾಗಿ ವಿದ್ಯಾರ್ಥಿನಿಯ ಚೂಡಿದಾರ್ ವೇಲ್ ಸೈಕಲ್ ನ ಚಕ್ರಕ್ಕೆ ಸಿಲುಕಿ ಅಪಾಯದಿಂದ ಪಾರಾದ ಘಟನೆ ಜು. 9ರಂದು ತೆಕ್ಕಟ್ಟೆ ಮಲ್ಯಾಡಿ ರಸ್ತೆಯಲ್ಲಿ ಸಂಭವಿಸಿದೆ.

Advertisement

ಉಳ್ತೂರಿನ ಮಹಾಬಲ ದೇವಾಡಿಗ ಅವರು ತನ್ನ ಮಗಳ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ತೆಕ್ಕಟ್ಟೆ ಸೈಬರ್ ಸೆಂಟರ್ ಗೆ ಅಗಮಿಸುತ್ತಿರುವ ಸಂದರ್ಭದಲ್ಲಿ ಈ ಘಟನೆ‌ ಸಂಭವಿಸಿದ್ದು, ವಿದ್ಯಾರ್ಥಿನಿಯ ಸಮಯ ಪ್ರಜ್ಞೆಯಿಂದಾಗಿ ಅದೃಷ್ಟವಶಾತ್ ಸಂಭವನೀಯ ಅವಘಡ ತಪ್ಪಿದಂತಾಗಿದೆ.

ಸ್ಥಳೀಯರ ಸ್ಪಂದನೆ: ಸೈಕಲ್ ನ ಹಿಂಬದಿಯ ಚಕ್ರಕ್ಕೆ ಸಿಲುಕಿದ ವೇಲ್ ತೆಗೆಯಲು ವಿದ್ಯಾರ್ಥಿನಿಯ ಪೋಷಕರಾದ ಮಹಾಬಲ ದೇವಾಡಿಗ ಹರಸಾಹಸ ಪಡುತ್ತಿರುವ ಸಂದರ್ಭದಲ್ಲಿ ಸ್ಥಳೀಯರಾದ ಟೈಲರ್ ಸುಬ್ರಾಯ ದೇವಾಡಿಗ, ಶಶಾಂಕ್, ಸುಬ್ರಹ್ಮಣ್ಯ ಹಾಗೂ ಗಜೇಂದ್ರ ಅವರು ತುರ್ತು ಸ್ಪಂದಿಸಿ ಮಾನವೀಯತೆ ಮೆರೆದರು.

Advertisement

Udayavani is now on Telegram. Click here to join our channel and stay updated with the latest news.

Next