Advertisement

ತೆಕ್ಕಟ್ಟೆ: ಕಾರುಗಳು ಪರಸ್ಪರ ಢಿಕ್ಕಿ

01:40 AM Feb 11, 2023 | Team Udayavani |

ತೆಕ್ಕಟ್ಟೆ: ಇಲ್ಲಿನ ರಾ.ಹೆ. 66ರ ರೈಸ್‌ಮಿಲ್‌ ಎದುರು ಚಲಿಸುತ್ತಿದ್ದ ಕಿಯಾ ಸೆಲ್ಟೋಸ್‌ ವಾಹನಕ್ಕೆ ಟಾಟಾ ಇಂಡಿಕಾ ಕಾರು ಏಕಾಏಕಿ ಅಡ್ಡ ಬಂದು ಢಿಕ್ಕಿಯಾಗಿ ಜಖಂಗೊಂಡ ಘಟನೆ ಫೆ. 10ರಂದು ಅಪರಾಹ್ನ ಸಂಭವಿಸಿದೆ.

Advertisement

ಮೊಬೈಲ್‌ ಟವರ್‌ನ ದುರಸ್ತಿ ಕಾರ್ಯದ ಉದ್ಯೋಗಿಗಳು ಆಗಮಿ ಸಿದ್ದ‌ ಇಂಡಿಕಾ ಕಾರಿನ ಬ್ಯಾಟರಿ ನಿಷ್ಕ್ರಿಯಗೊಂಡ ಪರಿಣಾಮ ರಸ್ತೆಯ ಒಂದು ಬದಿಯಿಂದ ವಾಹನವನ್ನು ತಳ್ಳಿ ಪ್ರಾರಂಭ ಮಾಡುವಾಗ ಕಾರು ಚಾಲಕನ ನಿಯಂತ್ರಣ ತಪ್ಪಿ ಏಕಾಏಕಿ ರಾ.ಹೆ. 66 ಪ್ರವೇಶಿಸಿತು. ಅದೇ ಸಂದರ್ಭ ಕೋಟೇಶ್ವರದಲ್ಲಿ ಮದುವೆ ಸಮಾರಂಭ ಮುಗಿಸಿ ಕೋಟದ ಕಡೆಗೆ ಸಾಗುತ್ತಿದ್ದ ಕಿಯಾ ಸೆಲ್ಟೋಸ್‌ ವಾಹನಕ್ಕೆ ನೇರವಾಗಿ ಬಂದು ಢಿಕ್ಕಿ ಹೊಡೆದಿದೆ.

ತೆರೆದುಕೊಂಡ 2 ಏರ್‌ಬ್ಯಾಗ್‌
ಸೆಲ್ಟೋಸ್‌ ವಾಹನದ ಮುಂಭಾಗದ ಎರಡು ಏರ್‌ ಬ್ಯಾಗ್‌ಗಳು ತೆರೆದಿವೆ. ಅದೃಷÌವಶಾತ್‌ ಸಂಭವನೀಯ ಭಾರೀ ಅವಘಡ ತಪ್ಪಿದೆ. ಕಾರು ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆೆ.

ಬೈಕ್‌-ಟಿಪ್ಪರ್‌ ಢಿಕ್ಕಿ: ಸವಾರ ಗಂಭೀರ
ಕೊಲ್ಲೂರು: ಜಡ್ಕಲ್‌ ಗ್ರಾ.ಪಂ. ವ್ಯಾಪ್ತಿಯ ಬೀಸಿನಪಾರೆ ನಿವಾಸಿ ರಾಜೇಶ(26) ಅವರು ಸ್ನೇಹಿತನೊಡನೆ ಕಾರ್ಯನಿಮಿತ್ತ ಬೈಕ್‌ನಲ್ಲಿ ತೆರಳಿ ಮನೆಗೆ ಹಿಂದಿರುಗುತ್ತಿದ್ದ ಸಂದರ್ಭ ಜಡ್ಕಲ್‌ ಗ್ರಾ.ಪಂ. ಬಳಿ ಮುದೂರು ಕಡೆಯಿಂದ ಜಡ್ಕಲ್‌ಗೆ ಅತೀ ವೇಗದಲ್ಲಿ ಸಾಗುತ್ತಿದ್ದ ಟಿಪ್ಪರ್‌ ಢಿಕ್ಕಿ ಹೊಡೆದಿದೆ. ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡು ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೊಲ್ಲೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಗಾಂಜಾ ಸೇವನೆ: ಮೂವರು ವಶಕ್ಕೆ
ಮಣಿಪಾಲ: ಪೆರಂಪಳ್ಳಿ ರಸ್ತೆಯ ಬಳಿ ಗಾಂಜಾ ಸೇವಿಸುತ್ತಿದ್ದ ಬ್ರಹ್ಮಗಿರಿಯ ಫೈಜಲ್‌ ಅಹಮ್ಮದ್‌ (23), ಕೇರಳದ ಅಂಜಲಿ ಎಸ್‌. ಮೆನನ್‌ (26) ಮತ್ತು ಮಣಿಪಾಲದ ಶುೃತಿ ಬಂಗೇರ (24) ಅವರನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಫಾರೆನ್ಸಿಕ್‌ ವರದಿಯಲ್ಲಿ ಅವರು ಗಾಂಜಾ ಸೇವಿಸಿರುವುದು ದೃಢಪಟ್ಟಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next