Advertisement

Mangaluru ಸೈಟ್‌ನಿಂದ ಮನೆ ನಿರ್ಮಾಣ ಸಾಮಗ್ರಿ ಕಳವು

11:29 PM Nov 15, 2023 | Team Udayavani |

ಮಂಗಳೂರು: ಮನೆ ನಿರ್ಮಾಣಕ್ಕೆಂದು ತಂದಿಟ್ಟ ಸಾಮಗ್ರಿಗಳನ್ನು ಕಳವು ಮಾಡಿದ ಘಟನೆ ಕಾವೂರು ಪೊಲೀಸ್‌ ಠಾಣಾ ವ್ಯಾಪ್ತಿಯ ನಂದನಪುರದ ಮಂಜಲ್‌ಕಟ್ಟೆಯಲ್ಲಿ ನಡೆದಿದೆ.

Advertisement

ಜ್ಯೋತಿ ಜೈನ್‌ ಅವರು ತಮ್ಮ ಸೈಟ್‌ನಲ್ಲಿ ಮನೆ ನಿರ್ಮಾಣ ಮಾಡುತ್ತಿದ್ದು ಅಲ್ಲಿ ಒಂದು ರೂಮ್‌ ಕಟ್ಟಿ ಕೆಲಸದ ಸಾಮಗ್ರಿಗಳನ್ನು ಅದರಲ್ಲಿರಿಸಿ ಬೀಗ ಹಾಕಿದ್ದರು.

ನ.13ರಂದು ಕೂಡ ಬೀಗ ಹಾಕಿದ್ದರು. ಮರುದಿನ ಕೆಲಸದ ಗುತ್ತಿಗೆದಾರ ಅಜೀಮ್‌ ಅವರು ಜ್ಯೋತಿ ಜೈನ್‌ ಅವರಿಗೆ ಕರೆ ಮಾಡಿ ಸಾಮಗ್ರಿಗಳು ಕಳವಾಗಿರುವ ಬಗ್ಗೆ ತಿಳಿಸಿದ್ದಾರೆ.

ಜ್ಯೋತಿ ಅವರು ಸ್ಥಳಕ್ಕೆ ಹೋಗಿ ನೋಡಿದಾಗ 2 ವಾಟರ್‌ ಪಂಪ್‌, 2 ಕಟ್ಟಿಂಗ್‌ ಯಂತ್ರ ಮೊದಲಾದ ಸುಮಾರು 65,000 ರೂ. ಮೌಲ್ಯದ ಸಾಮಗ್ರಿಗಳನ್ನು ಕಳವು ಮಾಡಿರುವುದು ಗೊತ್ತಾಗಿದೆ. ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next