Advertisement

Kunigal: ಮನೆ ಬೀಗ ಹೊಡೆದು ಕಳ್ಳತನ

09:49 AM Sep 23, 2023 | Team Udayavani |

ಕುಣಿಗಲ್: ಮನೆಯಲ್ಲಿ ಯಾರು ಇಲ್ಲದ ವೇಳೆ ಕಳ್ಳರು ಮನೆ ಬಾಗಿಲು ಹಾಗೂ ಬೀರುವಿನ ಬೀಗ ಹೊಡೆದು ಬೀರುವಿನಲ್ಲಿದ್ದ ನಗದು ಹಣ ಕಳವು ಮಾಡಿ ಪರಾರಿಯಾಗಿರುವ ಘಟನೆ ತಾಲೂಕಿನ ಹುಲಿಯೂರುದುರ್ಗ ಹೋಬಳಿ ಆರ್.ಬ್ಯಾಡರಹಳ್ಳಿ ಗ್ರಾಮದಲ್ಲಿ ನಡೆದಿದೆ.

Advertisement

ಗ್ರಾಮದ ಚಂದ್ರಮ್ಮ ಹಣ ಕಳೆದುಕೊಂಡ ವೃದ್ದ ಮಹಿಳೆ.

ಚಂದ್ರಮ್ಮ ಆನಾರೋಗ್ಯದಿಂದ ಬಳಲುತ್ತಿದ್ದು, ಅವರನ್ನು ಆಕೆಯ ಮಗಳು ಮಂಗಳಗೌರಮ್ಮ ಮದ್ದೂರು ಆಸ್ಪತ್ರೆಗೆ ಕಳೆದ ಮೂರು ದಿನಗಳಿಂದ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದರು.

ಈ ಸಂದರ್ಭ ಮನೆಯಲ್ಲಿ ಯಾರು ಇಲ್ಲದ ವೇಳೆ ದುಷ್ಕರ್ಮಿಗಳು ಮನೆಯ ಬೀಗ ಹೊಡೆದು ಒಳಗೆ ಪ್ರವೇಶಿಸಿ ಗಾಡ್ರೇಜ್ ಬೀರುವನ್ನು ಯಾವುದೋ ಆಯುಧ ಬಳಸಿ ಬೀರುವಿನಲ್ಲಿದ್ದ 26 ಸಾವಿರ ರೂ. ನಗದು ಹಣ ಕಳವು ಮಾಡಿ ಹೋಗಿದ್ದಾರೆ.

ಮನೆಯ ಬಾಗಿಲು ಹೊಡೆದಿರುವುದು ಗಮನಿಸಿದ ಗ್ರಾಮಸ್ಥರು ಮಂಗಳಗೌರಮ್ಮನಿಗೆ ವಿಷಯ ತಿಳಿಸಿದ್ದಾರೆ. ಮಂಗಳಗೌರಮ್ಮ ಹುಲಿಯೂರುದುರ್ಗ ಪೊಲೀಸರಿಗೆ ದೂರು ನೀಡಿದ್ದು, ಪಿಎಸ್‌ಐ ಸುನೀಲ್‌ಕುಮಾರ್ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next