Advertisement

ಅಂಗಡಿಗಳಲ್ಲಿ ಸರಣಿ ಕಳ್ಳತನ

09:54 AM Oct 16, 2021 | Team Udayavani |

ಚಿತ್ತಾಪುರ: ಪಟ್ಟಣದ ಹೃದಯ ಭಾಗದ ತರಕಾರಿ ಮಾರುಕಟ್ಟೆ ರಸ್ತೆಯಲ್ಲಿ ಗುರುವಾರ ರಾತ್ರಿ ಮೂರು ಅಂಗಡಿಗಳಲ್ಲಿ ಸರಣಿ ಕಳ್ಳತನ ನಡೆದಿರುವ ಘಟನೆ ಶುಕ್ರವಾರ ಬೆಳ್ಳಂ ಬೆಳಗ್ಗೆ ಬೆಳಕಿಗೆ ಬಂದಿದೆ.

Advertisement

ಕಳ್ಳತನ ಆದ ವಿಷಯ ತಿಳಿಯುತ್ತಿದ್ದಂತೆ ಪಟ್ಟಣದ ಜನತೆ ತಂಡೋಪ ತಂಡವಾಗಿ ಆಗಮಿಸಿ ನೋಡುತ್ತಿದ್ದರು. ಇನ್ನೊಂದೆಡೆ ಪಟ್ಟಣದ ವ್ಯಾಪಾರಿಗಳ ವಲಯದಲ್ಲಿ ಆತಂಕ ಸೃಷ್ಟಿಯಾಗಿತ್ತು. ಪಟ್ಟಣದ ಆಸೀಫ್‌ ಮೆಡಿಕಲ್‌, ವಿಶ್ವನಾಥ ಕಿರಾಣಿ, ಚಾವುಸ್‌ ಕಿರಾಣಿ ಅಂಗಡಿಗಳ ಶೆಟರ್‌ ಮುರಿದು ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಅಂಗಡಿಯಲ್ಲಿನ ಹಣ ದೋಚಿ ಪರಾರಿಯಾಗಿದ್ದಾರೆ.

ಸಿಪಿಐ ಕೃಷ್ಣಪ್ಪ ಕಲ್ಲದೇವರು, ಪಿಎಸ್‌ಐ ಮಂಜುನಾಥ ರೆಡ್ಡಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಶ್ವಾನ ಹಾಗೂ ಬೆರಳಚ್ಚು ತಜ್ಞರಿಂದ ಪರಿಶೀಲನೆ ನಡೆಯಿತು. ಆಸೀಫ್‌ ಮೆಡಿಕಲ್‌ದಿಂದ ಆರು ಸಾವಿರ ರೂ. ವಿಶ್ವನಾಥ ಕಿರಾಣಿ ಅಂಗಡಿಯಿಂದ ಮೂರು ಸಾವಿರ ರೂ., ಚಾವುಸ್‌ ಕಿರಾಣಿ ಅಂಗಡಿಯಿಂದ 3500ರೂ. ಕಳ್ಳತನವಾಗಿದೆ. ಆಸೀಫ್‌ ಮೆಡಿಕಲ್‌ ಅಂಗಡಿಯಲ್ಲಿನ ಸಿಸಿ ಕ್ಯಾಮೆರಾದಲ್ಲಿ ಕಳ್ಳತನ ಮಾಡಿದ ಘಟನೆ ದಾಖಲಾಗಿದೆ. ಇದನ್ನೇ ಆಧರಿಸಿ ಮೂವರು ಆರೋಪಿತರು ಸಿಕ್ಕಿಬಿದ್ದಿದ್ದಾರೆ.

ದೀಪಕ್‌ ಶ್ರೀನಿವಾಸ ಸುಗಂ, ಚಕ್ರ ಮದನಕುಮಾರ, ರಾಜಶೇಖರ ರೆಡ್ಡಿ, ಅಜಯಕುಮಾರ ಬಂಗಾರಿ, ರಾಜಶೇಖರ ರೆಡ್ಡಿ ಬಂಧಿತ ಆರೋಪಿತರು. ಇವರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಪಿಎಸ್‌ಐ ಮಂಜುನಾಥರೆಡ್ಡಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next