Advertisement

ಗಂಗಾವತಿ: ಭತ್ತ ಮಾರಾಟ ಮಾಡಿದ್ದ ರೈತನ 4.30 ಲಕ್ಷ ರೂ ಎಗರಿಸಿದ ಕಳ್ಳರು

03:04 PM Aug 16, 2021 | Team Udayavani |

ಗಂಗಾವತಿ: ರೈತನೋರ್ವ ಭತ್ತ ಮಾರಾಟ ಮಾಡಿ ಬ್ಯಾಂಕಿನಿಂದ ಹಣ ಪಡೆದುಕೊಂಡು ಹೋಗುವಾಗ ಕಳ್ಳರು ಕೈಚಳಕ ತೋರಿಸಿ ದೋಚಿದ ಘಟನೆ ನಗರದ ಸಿಬಿಎಸ್ ಗಂಜ್ ನಲ್ಲಿ ಜರುಗಿದೆ.

Advertisement

ತಾಲೂಕಿನ ಅಯೋಧ್ಯಾ ಕ್ಯಾಂಪಿನ ನಾಗೇಶ್ ರಾವ್ ಎಂಬ ರೈತ ಭತ್ತ ಮಾರಾಟ ಮಾಡಿ ನಗರದಲ್ಲಿರುವ ಇಂಡಿಯನ್ ಓವರ್ ಸೀಸ್ ಬ್ಯಾಂಕಿನಲ್ಲಿ ಹಣ ಡ್ರಾ ಮಾಡಿ ತೆಗೆದುಕೊಂಡು ಹೋಗಿ ಸಿಬಿಎಸ್ ಗಂಜ್ ನಲ್ಲಿರುವ ಸಾಯಿಕೀರ್ತಿ ದಲಾಲಿ ಅಂಗಡಿ ಹತ್ತಿರ ಬೈಕ್ ನಿಲ್ಲಿಸಿದ ಸಂದರ್ಭದಲ್ಲಿ ಕಳ್ಳರು ಕೈ ಚಳಕ ತೋರಿಸಿ 4.30 ಲಕ್ಷ ಹಣವನ್ನು ಕಳ್ಳತನ ಮಾಡಿದ ಘಟನೆ ಜರುಗಿದೆ.

ಇದನ್ನೂ ಓದಿ:ಅಜ್ಜಿಯ ಹಲ್ಲಿನ ಸೆಟ್ ಹಾಳು ಮಾಡಿದ ಹಸುಳೆಯ ಹತ್ಯೆ: ಆರೋಪಿ ಬಂಧನ

ಪೊಲೀಸರಿಂದ ಪರಿಶೀಲನೆ: ಬ್ಯಾಂಕಿನಿಂದ ಹಣ ಪಡೆದು ಹೊರ ಹೋಗುವ ಸಂದರ್ಭದಲ್ಲಿ ಹಣವನ್ನು ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ವೆಂಕಟಸ್ವಾಮಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಬ್ಯಾಗ್ ನಲ್ಲಿದ್ದ ಸಿಸಿ ಕ್ಯಾಮೆರಾಗಳನ್ನು ಮತ್ತು ಸಾಯಿಕೀರ್ತಿ ದಲಾಲಿ ಅಂಗಡಿ ಹತ್ರ ಇರುವ ಸಿಸಿ ಕ್ಯಾಮೆರಾಗಳ ಕುರಿತು ಪರಿಶೀಲನೆ ನಡೆಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next