Advertisement

Theft Case ಉಮ್ರಾ ಯಾತ್ರಿಕನ ನಗದು ಕಳವು

01:18 AM May 12, 2024 | Team Udayavani |

ಮಂಗಳೂರು: ಮಂಗಳೂರಿನಿಂದ ಉಮ್ರಾ ಯಾತ್ರೆಗೆ ತೆರಳಿದ್ದ 35 ಮಂದಿಯ ತಂಡ ಖರ್ಚಿಗಾಗಿ ಬ್ಯಾಗಿನಲ್ಲಿ ಇಟ್ಟುಕೊಂಡಿದ್ದ 26,432 ಸೌದಿ ರಿಯಾಲ್‌ ಕರೆನ್ಸಿ (ಸುಮಾರು 5.88 ಲಕ್ಷ ರೂ.ಭಾರತೀಯ ಮೌಲ್ಯ) ವಿಮಾನ ನಿಲ್ದಾಣದಲ್ಲಿ ಕಳವು ಆಗಿರುವ ಕುರಿತಂತೆ ಬಜಪೆ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

ಮಂಗಳೂರಿನಿಂದ ಜೆಡ್ಡಾ ತಲುಪುವಷ್ಟರಲ್ಲಿ ಅವರ ಬ್ಯಾಗಿನಿಂದ ಯಾರೋ ಕಳವುಗೈದಿದ್ದಾರೆ ತಂಡದ ಮುಖ್ಯಸ್ಥ ಅಹ್ಮದ್‌ ಇಕ್ಬಾಲ್‌ ಅವರ ಪತ್ನಿ ಬಜ್ಪೆ ಠಾಣೆಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.

ಅಹ್ಮದ್‌ ಇಕ್ಬಾಲ್‌, ಇತರ 35 ಮಂದಿಯ ಜತೆಗೆ ಹಜ್‌ ಯಾತ್ರೆ ಕೈಗೊಂಡಿದ್ದರು. ಮೇ 1ರಂದು ತಂಡದ ಸದಸ್ಯರು ಜೆಡ್ಡಾ ತಲುಪಿದ ವೇಳೆ ಪರಿ ಶೀಲನೆ ನಡೆಸಿದ್ದು ಈ ವೇಳೆ ಹಣ ಇದ್ದ ಬ್ಯಾಗಿನಿಂದ ಕರೆನ್ಸಿ ಕಳವು ಮಾಡಲಾಗಿತ್ತು. ನಗರ ಅಪರಾಧ ವಿಭಾಗದ ಡಿಸಿಪಿ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ವಿಮಾನ ನಿಲ್ದಾಣದಲ್ಲಿ ಸಿಸಿಟಿವಿ ಪರಿಶೀಲನೆ ನಡೆಸಿದ್ದು ಯಾವುದೇ ಸುಳಿವು ಸಿಕ್ಕಿಲ್ಲ. ಪ್ರವಾಸಿ ತಂಡವು ಮಂಗಳೂರಿನಿಂದ ಮುಂಬಯಿ, ಜೆಡ್ಡಾ ತಲುಪಿದ ಬಳಿಕ ಕಳವಾಗಿರುವುದನ್ನು ನೋಡಿದೆ. ಹೀಗಾಗಿ ಈ ನಡುವಲ್ಲಿ ಯಾವುದೇ ಕಡೆ ಕಳವು ಆಗಿರುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next