Advertisement

Theft case: ಬೀಗ ಹಾಕಿದ್ದ ಮನೆಗಳ ಬಾಗಿಲು ಒಡೆದು ಕಳ್ಳತನ; ಮೂವರ ಸೆರೆ

11:05 AM Mar 27, 2024 | Team Udayavani |

ಬೆಂಗಳೂರು: ಬೀಗ ಹಾಕಿದ ಮನೆಗಳ ಬಾಗಿಲು ಮುರಿದು ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಉತ್ತರಹಳ್ಳಿ ನಿವಾಸಿ ರಘು(23), ಜೆ.ಪಿ.ನಗರದ ಜರಗನಹಳ್ಳಿ ನಿವಾಸಿ ದೀಪಕ್‌(23) ಮತ್ತು ತ್ಯಾಗರಾಜನಗರ ನಿವಾಸಿ ಮಿಥುನ್‌ ಅಲಿಯಾಸ್‌ ಮಿಲ್ಕಿ(23) ಬಂಧಿತರು. ಆರೋಪಿಗಳಿಂದ 16.60 ಲಕ್ಷ ರೂ. ಮೌಲ್ಯದ 200 ಗ್ರಾಂ ಚಿನ್ನಾಭರಣ, 2 ಕೆ.ಜಿ.ಬೆಳ್ಳಿ ವಸ್ತುಗಳು ಮತ್ತು 3 ಲಕ್ಷ ರೂ. ಮೌಲ್ಯದ ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು. ಆರೋಪಿಗಳ ಪೈಕಿ ಇಬ್ಬರು ಬೈಕ್‌ನಲ್ಲಿ ಬೆಳಗ್ಗೆ ವೇಳೆ ಆಯ್ದ ಪ್ರದೇಶಗಳಲ್ಲಿ ಸುತ್ತಾಡುತ್ತಿದ್ದರು. ಈ ವೇಳೆ ಬೀಗ ಹಾಕಿದ ಮನೆಗಳನ್ನು ಗುರುತಿಸಿ, ಅಲ್ಲಿಂದಲೇ ಮತ್ತೂಬ್ಬನಿಗೆ ಲೋಕೇಷನ್‌ ಕಳುಹಿಸುತ್ತಿ ದ್ದರು. ಅದೇ ದಿನ ರಾತ್ರಿ ಆ ಮನೆ ಬಳಿ ಬಂದಾಗ ಮನೆ ಬೀಗ ಹಾಕಿದ್ದರೆ, ಬಾಗಿಲು ಒಡೆದು ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದರು. ಬಂದ ಹಣದಲ್ಲಿ ಮೋಜು-ಮಸ್ತಿ ಮಾಡುತ್ತಿದ್ದರು. ಮೂವರ ಬಂಧನದಿಂದ ನಗರದ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ ಐದು ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next