Advertisement

Theft Case ಗಂಗೊಳ್ಳಿ: ಸಾವಿರಾರು ರೂ. ಮೌಲ್ಯದ ಅಡಿಕೆ ಕಳವು

09:18 PM Feb 27, 2024 | Team Udayavani |

ಗಂಗೊಳ್ಳಿ: ಮನೆಯ ಸಿಟೌಟ್‌ ಬಳಿ ಇರಿಸಿದ್ದ ಅಡಿಕೆ ತುಂಬಿದ ಚೀಲಗಳನ್ನು ಕಳವುಗೈದ ಕುರಿತು ನೂಜಾಡಿ ಗ್ರಾಮದ ಡಾ| ಚಂದ್ರಶೇಖರ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

Advertisement

ಅಂದಾಜು 90 ಸಾವಿರ ರೂ. ಮೌಲ್ಯದ 160 ಕೆ.ಜಿ. ಅಡಿಕೆಯನ್ನು 4 ಚೀಲಗಳಲ್ಲಿ ತುಂಬಿಸಿ ಇಟ್ಟಿದ್ದು, ಬೆಳಗ್ಗೆ ನೋಡಿದಾಗ ಯಾರೋ ಕಳವು ಮಾಡಿದ್ದು ತಿಳಿದುಬಂದಿದೆ. ಕಳ್ಳತನಕ್ಕೆ ಸಂಬಂಧಿಸಿ ಸುದೇಶ ಮತ್ತು ನಾಗೇಶ ಅವರ ಮೇಲೆ ಅನುಮಾನವಿದೆ ಎಂದು ಪ್ರಕರಣ ದಾಖಲಾಗಿದೆ.

ಗಂಗೊಳ್ಳಿ: ಮಹಿಳೆ ಆತ್ಮಹತ್ಯೆ
ಗಂಗೊಳ್ಳಿ: ನಾಡ ಗ್ರಾಮದ ಶಾಂತಿ (43) ಅವರು ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದು, ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರ ಪತಿ ಜಾನ್‌ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next