Advertisement

Theerthahalli: ಯುವಕನಿಗೆ ಹಲ್ಲೆ ;ತೀವ್ರ ಗಾಯ

11:38 AM Aug 28, 2023 | Kavyashree |

ತೀರ್ಥಹಳ್ಳಿ: ತಾಲೂಕು ಕೈಮರ ಸಮೀಪ ನಿನ್ನೆ ಮುಸ್ಸಂಜೆ ಹೊತ್ತಿನಲ್ಲಿ ರಸ್ತೆ ದಾಟುತ್ತಿದ್ದ ಯುವಕನೊಬ್ಬನ ಮೇಲೆ ಎರಡು ವಾಹನದಲ್ಲಿದ್ದವರು ಹಲ್ಲೆ ನಡೆಸಿರುವ ಬಗ್ಗೆ ವರದಿಯಾಗಿದೆ.

Advertisement

ಘಟನೆಯಲ್ಲಿ ಸಚಿನ್ ಎಂಬವರಿಗೆ ತೀವ್ರ ಗಾಯಗಳಾಗಿದ್ದು, ಅವರನ್ನು ಪಟ್ಟಣದ ಜೆಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಲ್ಮನೆ ಸಮೀಪದಲ್ಲಿ ಕೋಳಿ ಫಾರಂಗೆ ಹೋಗಲು ಸಚಿನ್ ರಸ್ತೆ ದಾಟುತ್ತಿದ್ದರು. ಈ ವೇಳೆ ಅದೇ ಮಾರ್ಗವಾಗಿ ಜೀಪೊಂದು ಅಲ್ಲಿಗೆ ಬಂದಿದ್ದು, ಅವರಿಗೆ ತಾನು ರಸ್ತೆ ದಾಟುತ್ತಿರುವುದು ಗೊತ್ತಾಗಲಿ ಎಂದು ಸಚಿನ್ ಕೈ ಅಡ್ಡ ತೋರಿಸಿದ್ಧಾರೆ. ಸ್ಥಳೀಯರು ಹೇಳುವಂತೆ ನಡೆದಿದ್ದುಇಷ್ಟು.

ಇದೇ ವಿಚಾರಕ್ಕೆ ಜೀಪ್ ನಿಲ್ಲಿಸಿ, ಅದರಲ್ಲಿದ್ದ ಯುವಕರು, ಸಚಿನ್​ನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ವೇಳೆ ಅಲ್ಲಿಗೆ ಬಂದ ನೆಕ್ಸಾ ಕಾರಿನಲ್ಲಿದ್ದವರು ಕೂಡ ಸಚಿನ್​ಗೆ ಹಲ್ಲೆ ಮಾಡಿದ್ದಾರೆ. ಎರಡು ವಾಹನಗಳಲ್ಲಿದ್ದವರು ಒಂದೇ ಕಡೆಯವರು ಎನ್ನಲಾಗಿದ್ದು, ಇವರು ಕುಡಿದ ಮತ್ತಿನಲ್ಲಿದ್ದರು ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಹಲ್ಲೆ ಮಾಡಿದವರು ನೆರೆಯ ಜಿಲ್ಲೆಯವರು ಎಂದು ಹೇಳಲಾಗುತ್ತಿದ್ದು, ಹಲ್ಲೆ ಮಾಡಿದವರ ಪೈಕಿ ಹೆಣ್ಣುಮಕ್ಕಳು ಸಹ ಇದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.

Advertisement

ಘಟನೆ ಬೆನ್ನಲ್ಲೆ ಆಕ್ರೋಶಗೊಂಡ ಸ್ಥಳೀಯರು ತೀರ್ಥಹಳ್ಳಿ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ತಕ್ಷಣವೇ ಅಲರ್ಟ್ ಆದ ಪೊಲೀಸರು ಹಲ್ಲೆ ಮಾಡಿದವರಿದ್ದ ವಾಹನಗಳನ್ನು ಟ್ರೇಸ್ ಮಾಡಿ ಅಡ್ಡಗಟ್ಟಿ ಸ್ಟೇಷನ್​ಗೆ ಕರೆತಂದು  ವಿಚಾರಣೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next