Advertisement

ಪರಿಷ್ಕರಣೆ ಖಂಡಿಸಿ ಪಾದಯಾತ್ರೆ

01:49 PM Jun 16, 2022 | Adarsha |

ತೀರ್ಥಹಳ್ಳಿ: ಬಹುತ್ವದ ವಿರೋ ಧಿ ಧೋರಣೆಮನೋಭಾವದ ರೋಹಿತ್‌ ಚಕ್ರತೀರ್ಥ ನೇತೃತ್ವದಸಮಿತಿಯ ಪಠ್ಯ ಪರಿಷ್ಕರಣೆಯನ್ನು ರದ್ದುಗೊಳಿಸಿ,ಪ್ರೊ| ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿಯಪಠ್ಯವನ್ನೇ ಮುಂದುವರೆಸಬೇಕೆಂದು ಆಗ್ರಹಿಸಿಕವಿಶೈಲ ಕುಪ್ಪಳಿಯಿಂದ ತೀರ್ಥಹಳ್ಳಿಯವರೆಗೆಮಾಜಿ ಶಾಸಕ ಕಿಮ್ಮನೆ ರತ್ನಾಕರ್‌ ನೇತೃತ್ವದಲ್ಲಿಸಾಹಿತಿಗಳು, ಬುದ್ಧಿಜೀವಿಗಳು, ವಿದ್ವಾಂಸರು, ಸರ್ವಸಂಘಟನೆಗಳು, ಪಾದಯಾತ್ರೆ ಮೂಲಕ ಬೃಹತ್‌ಪ್ರತಿಭಟನೆ ನಡೆಸಲಾಯಿತು.

Advertisement

ಪಠ್ಯ ಪರಿಷ್ಕರಣೆ ಸಮಿತಿಯಿಂದ ಆಗಿರುವ ಪಠ್ಯಪುಸ್ತಕ ಅಪಮೌಲೀಕರಣ, ವೈದೀಕರಣ, ಅಸಮಾನತೆ,ನಾಡಗೀತೆಗೆ ಅಪಮಾನ, ರಾಷ್ಟ್ರ ಕವಿ ಕುವೆಂಪುಗೆಅವಹೇಳನ, ಬಸವಣ್ಣ ಡಾ| ಬಿ.ಆರ್‌. ಅಂಬೇಡ್ಕರ್‌,ಶಂಕರಾಚಾರ್ಯರಿಗೆ ಅಗೌರವ ತೋರಿರುವಚಕ್ರತೀರ್ಥ ನೇತೃತ್ವದ ಪಠ್ಯ ಪರಿಷ್ಕರಣಾ ಸಮಿತಿಮತ್ತು ಅದನ್ನು ಬೆಂಬಲಿಸುತ್ತಿರುವ ರಾಜ ಸರ್ಕಾರದಧೋರಣೆ ಖಂಡಿಸಿ ಕವಿಶೈಲದಲ್ಲಿ ಕನ್ನಡದ ಕಹಳೆಮೊಳಗಿಸಿದರು.

ಮೊದಲು ಕುಪ್ಪಳ್ಳಿಯ ಕವಿಶೈಲದಲ್ಲಿ ಕುವೆಂಪುಅವರ ಸ್ಮಾರಕಕ್ಕೆ ಪೂಜೆ ಸಲ್ಲಿಸಿದ ನಂತರ ಈ ಬೃಹತ್‌ಪಾದಯಾತ್ರೆಗೆ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖಹಾಗೂ ಖ್ಯಾತ ಸಾಹಿತಿ ಪ್ರೊ| ಎಸ್‌.ಜಿ. ಸಿದ್ದರಾಮಯ್ಯಚಾಲನೆ ನೀಡಿದರು.ನಂತರ ಮಾತನಾಡಿದ ಸಂಗೀತ ನಿರ್ದೇಶಕಹಂಸಲೇಖ ಅವರು, ನಮ್ಮ ನಾಡೇ ಒಂದು ಧ್ವಜ.ಇದೀಗ ನಾಡು ನುಡಿಗೆ ಅವಮಾನವಾಗುತ್ತಿದೆ.ಕನ್ನಡದ ನಡು ಮುರಿಯುವ ನಡೆ ಕನ್ನಡ ನಾಡಿನಲ್ಲಿಶುರುವಾಗಿದೆ. ಭಾಷೆ ವಿಷಯ ಬಂದಾಗ ನಾವುತಮಿಳರನ್ನು ಅನುಸರಿಸಿ ಹೋರಾಟ ಮಾಡಬೇಕಿದೆ.ಅಲ್ಲಿ ಭಾಷೆಗೆ ಕೊಂಚ ಎಡವಟ್ಟಾದರೂ ಆಡಳಿತ ಮತ್ತುವಿರೋಧ ಪಕ್ಷ ಎಲ್ಲರೂ ಒಟ್ಟಾಗಿ ಸೇರಿಬಿಡುತ್ತಾರೆಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next