Advertisement

ಶತಮಾನ ಹಿಂದಿನ ಪರಂಪರೆ ನೆನಪಿಸಿದ ರಂಗ ಪ್ರವೇಶ

08:05 PM Feb 13, 2020 | Sriram |

ಇತ್ತೀಚೆಗೆ ರಂಗಪ್ರವೇಶ ಕಾರ್ಯಕ್ರಮವೊಂದು ತುಂಬ ವಿಶಿಷ್ಟವಾಗಿ ಜರಗಿತು. ಸನಾತನ ನಾಟ್ಯಾಲಯದ ನೃತ್ಯಗುರು ವಿ| ಶಾರದಾಮಣಿ ಶೇಖರ್‌, ವಿ| ಶ್ರೀಲತಾ ನಾಗರಾಜರವರ ಶಿಷ್ಯೆ ವಿ|ಕು| ವಾಣಿಶ್ರೀ ಅವರ ರಂಗಪ್ರವೇಶವು ಎರಡು ಹಂತಗಳಲ್ಲಿ ಬಹು ಸೊಗಸಾಗಿ ಜರಗಿತು.

Advertisement

ಮೊದಲ ಹಂತದಲ್ಲಿ – ಪಾರಂಪರಿಕ ದೇವಾಲಯ ರಂಗ ಪ್ರವೇಶ. ಇದು ಭರತನಾಟ್ಯ ಇತಿಹಾಸದಲ್ಲಿ ಬಹುಶಃ ನೂರು ವರ್ಷಗಳ ಹಿಂದೆ ಇದ್ದ ರಂಗಪ್ರವೇಶ ವಿಧಾನ. ಈಗ ಇದು ಪುನರುಜ್ಜೀವನ ಪಡೆದು ಇತಿಹಾಸ ನಿರ್ಮಿಸಿತು.

ಕಂಕನಾಡಿಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವೈದಿಕ ವಿಧಾನಪೂರ್ವಕ ನಡೆದ ರಂಗಪ್ರವೇಶದಲ್ಲಿ ನೂಪುರ ಪೂಜೆ, ದಿಕಾ³ಲ ವಂದನೆ, ಗಣೇಶಸ್ತುತಿ, ನಟರಾಜ ಸ್ತುತಿ, ದೇವಾತಾರ್ಚನೆಗಳು ಎರಡು ಹಂತಗಳಲ್ಲಿ ದೇವಾಲಯದ ಒಳಸುತ್ತಿನಲ್ಲಿ, ಹೊರಾಂಗಣದಲ್ಲಿ ಜರಗಿದವು.

ಎರಡನೆಯ ಹಂತದಲ್ಲಿ ಫೆ.2ರಂದು ಮಂಗಳೂರು ಪುರಭವನದಲ್ಲಿ ಜರಗಿದ ನೃತ್ಯೋಪಾಸನದಲ್ಲಿ ವಾಣಿಶ್ರೀ ಅವರು ಓರ್ವ ಉತ್ತಮ ಭವಿಷ್ಯವಿರುವ ಸಮರ್ಥ ಕಲಾವಿದೆ ಎಂದು ರಂಗಪ್ರವೇಶವನ್ನು ಸಾರಿದರು. ಸನಾತನ ನಾಟ್ಯಾಲಯದಲ್ಲಿ ಹದಿನೈದು ವರ್ಷಗಳಿಂದ ನೃತ್ಯಾಭ್ಯಾಸ ಮಾಡಿದ ಈ ಕಲಾವಿದೆಯ ಮತ್ತು ಗುರುಗಳ ಶ್ರಮಕ್ಕೆ ಸಾರ್ಥಕ್ಯವನ್ನು ತಂದಿತ್ತರು.

ಗಣೇಶವಂದನೆ, ನಟರಾಜನಮನ ಶ್ಲೋಕಗಳ ಪುಷ್ಪಾಂಜಲಿ ಪ್ರಸ್ತುತಿ ಪರಿಷ್ಕೃತವಾಗಿತ್ತು. ಜತಿಸ್ವರದಲ್ಲಿ ಸಮ ವಿಷಮ ನರ್ತನ, ಅಡವುಗಳ ವೈವಿಧ್ಯ, ಹದವಾಗಿ ನಿರೂಪಿತವಾಯಿತು.ಮುಂದಿನ ಮುರುಗನ್‌ ಶಬ್ಬಂನಲ್ಲಿ ಷಣ್ಮುಖ ಪರವಾಗಿ ನಾಯಕಿಯು ಗೈದ ವರ್ಣನೆ, ಪ್ರೀತಿ, ಆರ್ತತೆಗಳು ಮತ್ತು ಕೊನೆಗೆ ಬರುವ ವಳ್ಳಿ ಕಲ್ಯಾಣದ ವಿನೋದ ಮಿಶ್ರಿತ ಶೃಂಗಾರ ಇವುಗಳು ಸುಂದರ ಸಂಚಾರಿಗಳಾಗಿ ಪ್ರಸ್ತುತವಾದವು. ಶಬ್ಬಂ ವಿಭಾಗವು ನಿರೀಕ್ಷೆಗೆ ತಕ್ಕಂತೆ ಸಶಕ್ತ ಶಬ್ದವಾಯಿತು.

Advertisement

ಲಾಲ್‌ಗ‌ುಡಿ ಜಯರಾಮನ್‌ ಅವರ ಶ್ರೀ ಕೃಷ್ಣ ನ ಕುರಿತಾದ ಪದವರ್ಣ ಕೃತಿಯಲ್ಲಿ ಕಲಾವಿದೆಯ ಸರ್ವಾಂಗ ನೃತ್ಯ-ನೃತ್ತ-ನಾಟ್ಯ ಪ್ರತಿಭೆ ಸುಂದರವಾಗಿ ಪ್ರಕಟವಾಯಿತು. ಕಲಾವಿದನಿಗೆ ಪಂಥಾಹಾ³ನದಂತಿರುವ ವಿಭಾಗ ಮತ್ತು ಈ ಕೃತಿಯಲ್ಲಿ ವಿದುಷಿ ವಾಣಿಶ್ರೀಯ ನೃತ್ಯ ಸಾಮರ್ಥ್ಯದ ಪ್ರೌಢವಾದ ಪರಿಣತಿ ಚೆನ್ನಾಗಿ ಪ್ರಕಾಶಕ್ಕೆ ಬಂದಿತು. 45 ನಿಮಿಷಗಳ ಈ ಸುಂದರ ನೃತ್ಯದಲ್ಲಿ ಅಡವುಗಳ ಖಚಿತ ನೈಪುಣ್ಯ, ವಿವಿಧ ಭಾವಗಳ ಚಲನೆ, ಸ್ಥಿರಭಂಗಿ, ನೋಟದ ಅಭಿವ್ಯಕ್ತಿ, ಸ್ಥಾಯಿ-ಸಂಚಾರಿ ಮತ್ತು ಪರಿವರ್ತನೆಗಳ ವಿನ್ಯಾಸಗಳು ಶ್ರೀಕೃಷ್ಣನ ಜೀವನದ ವಿವಿಧ ಮುಖಗಳ ನೃತ್ಯ ರೂಪೀಕರಣ ಉನ್ನತವಾದ ಮಟ್ಟದಲ್ಲಿತ್ತು. ಲಯ, ಅಂಗಶುದ್ಧಿ ಮತ್ತು ಗಾಂಭೀರ್ಯದ ನಿಲುವುಗಳು ಮಾದರಿಯಾಗಿದ್ದುವು. ಕೊನೆಯ ಭಾಗದಲ್ಲಿ ದೇವರ ನಾಮ ಪುರಂದರದಾಸರ “ನಾನೇನು ಮಾಡಲಿ ರಂಗಯ್ಯ ಕೃತಿಯಲ್ಲಿ ಆರ್ತತೆ, ಸಂಚಾರಿಭಾವವಾಗಿ ಅಹಲೆÂ, ಕುಚೇಲ ಮುಂತಾದ ಕತೆಗಳ ಸ್ಪರ್ಶ ಚಂದವಾಗಿತ್ತು. ಮಧುರೈ ಕೃಷ್ಣನ್‌ ಅವರ ತಿಲ್ಲಾನದೊಂದಿಗೆ ಕೊನೆಗೊಂಡ ನೃತ್ಯೋಪಾಸನಂ ಮೇಲ್ಮಟ್ಟದ ಕಲಾನುಭಾವ ನೀಡಿತು. ನಟ್ಟುವಾಂಗವನ್ನು ವಿ| ಶಾರದಾಮಣಿ ಶೇಖರ್‌ ನಡೆಸಿದರು. ಕು| ವಸುಧಾಶ್ರೀ ಕೋಳಿಕ್ಕಜೆ (ಹಾಡುಗಾರಿಕೆ) ವಿ| ರಾಜನ್‌ ಪಯ್ಯನೂರು (ಮೃದಂಗ), ಮಾ| ಅಭಿಷೇಕ್‌ (ಕೊಳಲು) ಇವರು ತುಂಬ ಹೊಂದಿಕೆಯಾಗಿ ರಾಗ, ಭಾವ ಮತ್ತು ನೃತ್ಯಾನುಕೂಲದ ನಾಜೂಕಾದ ಪ್ರಸ್ತುತಿಯಲ್ಲಿ ಉನ್ನತವಾದ ಒಂದು ಮಾದರಿ ಮಟ್ಟವನ್ನು ನೀಡಿ ನರ್ತನವು ಮೆರೆಯುವಂತೆ ಶಕ್ತಿ ನೀಡಿದ್ದು, ಸ್ಮರಣೀಯ ಅನುಭವವಾಗಿತ್ತು.

ವಿ| ರಾಜಶ್ರೀ ಶೆಣೈ, ಉಳ್ಳಾಲ

Advertisement

Udayavani is now on Telegram. Click here to join our channel and stay updated with the latest news.

Next