Advertisement

ಜಾಂಬ್ರಿ ಉತ್ಸವಕ್ಕೆ ಮುಸ್ಲಿಮರಿಂದ ಹೊರೆಕಾಣಿಕೆ

12:31 PM May 01, 2017 | Team Udayavani |

ಮುಳ್ಳೇರಿಯ: ನೆಟ್ಟಣಿಗೆ ಮಹತೋಭಾರ ಶ್ರೀ ಮಹಾಲಿಂಗೇಶ್ವರ ಕ್ಷೇತ್ರದಲ್ಲಿ ನಡೆಯುತ್ತಿರುವ ವಾರ್ಷಿಕ ಶ್ರೀ ಭೂತಬಲಿ ಉತ್ಸವ, ಅತಿರುದ್ರ ಮಹಾಯಾಗ ಮತ್ತು 12 ವರ್ಷಗಳಿಗೊಮ್ಮೆ ನಡೆಯುವ ಐತಿಹಾಸಿಕ ಜಾಂಬ್ರಿ ಸ್ವಯಂ ಭೂ ಗುಹಾ ಪ್ರವೇಶೋತ್ಸವದ ಅಂಗವಾಗಿ ನೆಟ್ಟಣಿಗೆ  ಕ್ಷೇತ್ರಕ್ಕೆ ಕಳೆದ 4 ದಿನಗಳಿಂದ ಭಕ್ತರು ಪ್ರವಾಹೋಪಾದಿಯಲ್ಲಿ ಹರಿದುಬರುತ್ತಿದ್ದಾರೆ.

Advertisement

ರವಿವಾರ ಸಂಜೆ ನೆಟ್ಟಣಿಗೆ ಕ್ಷೇತ್ರದ ಆಸುಪಾಸಿನ ಆರ್ಲಪದವು, ಪಡುಮಲೆ, ಕಾನಕ್ಕೋಡು, ಬಜ- ನೆಟ್ಟಣಿಗೆ, ಕಿನ್ನಿಂಗಾರು, ಕರೋಡಿ, ಪಳ್ಳಪ್ಪಾಡಿಯ 7 ಜಮಾ ಆತ್‌ ಸಮಿತಿಯವರು ಬೃಹತ್‌ ಹಸಿರುವಾಣಿ ಹೊರೆಕಾಣಿಕೆ ಗಳೊಂದಿಗೆ ಆಗಮಿಸಿ ಸೌಹಾರ್ದಕ್ಕೆ ಹೊಸ ಭಾಷ್ಯ ಬರೆದರು.  ಸಾವಿರಕ್ಕಿಂತಲೂ ಅಧಿಕ ಸಂಖ್ಯೆಯ ಮುಸ್ಲಿಂ ಬಾಂಧವರು ಈ ಸಂದರ್ಭ ಆಗಮಿಸಿದ್ದರು.
 

Advertisement

Udayavani is now on Telegram. Click here to join our channel and stay updated with the latest news.

Next