Advertisement

ಬೆಂಕಿ ಆರಿಸಲು ಹೋದ ಯುವಕ ಗಂಭೀರ

12:54 PM May 19, 2019 | Team Udayavani |

ಹಾನಗಲ್ಲ: ಶಾಲೆಯ ಪಕ್ಕದಲ್ಲಿನ ಭತ್ತದ ಬಣವೆಗೆ ಬೆಂಕಿ ಹತ್ತಿ ಶಾಲೆಗೂ ಬೆಂಕಿ ಬೀಳುತ್ತಿರುವುದನ್ನು ತಪ್ಪಿಸಲು ಹೋದ ಯುವಕನೋರ್ವ ಬೆಂಕಿ ಹತ್ತಿದ್ದ ಬಣವೆಗೆ ಬಿದ್ದು ತೀವ್ರ ಸುಟ್ಟು ಗಾಯಗೊಂಡ ಘಟನೆ ತಾಲೂಕಿನ ಯಲಿವಾಳ ಗ್ರಾಮದಲ್ಲಿ ಸಂಭವಿಸಿದೆ.

Advertisement

ಯಲಿವಾಳ ಗ್ರಾಮದ ಯಲ್ಲಪ್ಪ ಕುರುಬರ ಅವರಿಗೆ ಸೇರಿದ ಸುಮಾರು ಏಳು ಎಕರೆ ಭತ್ತದ ಹುಲ್ಲಿನ ಬಣವೆಗೆ ಬೆಂಕಿ ಹತ್ತಿದ್ದು, ಆ ಬೆಂಕಿ ಪಕ್ಕದ ಶಾಲೆಗೂ ಆವರಿಸುತ್ತಿರುವುದನ್ನು ಗಮನಿಸಿದ ಯುವಕರು, ಶಾಲೆಗೆ ಬೆಂಕಿ ಬಿಳುವುದನ್ನು ತಪ್ಪಿಸಲು ಶಾಲೆಯ ಮೇಲ್ಛಾವಣಿ ಮೇಲೆ ಹತ್ತಿ ಬೆಂಕಿ ಆರಿಸಲು ಮುಂದಾಗಿದ್ದರು. ಈ ವೇಳೆ ಮಾರುತಿ ದೇವೇಂದ್ರಪ್ಪ ರಂಗಣ್ಣನವರ(23) ಎಂಬ ಯುವಕ ಆಯತಪ್ಪಿ ಬೆಂಕಿ ಬಿದ್ದ ಬಣವೆಯೊಳಗೆ ಬಿದ್ದು ತೀವ್ರವಾಗಿ ಸುಟ್ಟು ಗಾಯಗೊಂಡಿದ್ದಾನೆ. ತಕ್ಷಣ ಗ್ರಾಮಸ್ಥರು ಆತನನ್ನು ಶಿಗ್ಗಾವಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳು ಮಾರುತಿಯನ್ನು ಹುಬ್ಬಳ್ಳಿ ಕಿಮ್ಸಗೆ ದಾಖಲಿಸಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ ಎಂದು ತಿಳಿದು ಬಂದಿದೆ.

ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶೇ.60 ದೇಹ ಸುಟ್ಟಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕಿಮ್ಸ್‌ ವೈದ್ಯರು ಸುದ್ದಿಗಾರರಿಗೆ ತಿಳಿಸಿದರು. ಈ ಕುರಿತು ಗಾಯಾಳುವಿನ ಸೋದರ ಸಂಬಂಧಿ ಅಣ್ಣಪ್ಪ ರಂಗಣ್ಣನವರ ಹಾನಗಲ್ಲ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next