Advertisement

Aminagad ಕಬಾಬ್ ಖಾಲಿ ಎಂದಿದ್ದಕ್ಕೆ ಅಂಗಡಿ ಮಾಲೀಕನನ್ನೇ ಕೊಲೆ ಮಾಡಿದ ಯುವಕ!

09:15 PM Sep 18, 2023 | Team Udayavani |

ಅಮೀನಗಡ:ಕಬಾಬ್ ಖಾಲಿ ಎಂದಿದ್ದಕ್ಕೆ ಅಂಗಡಿ ಮಾಲೀಕನನ್ನೇ ಯುವಕನೋರ್ವ ಚಾಕು ಇರಿದು ಕೊಲೆ ಮಾಡಿರುವ ಘಟನೆ ಪಟ್ಟಣದ ಬಸ್ ನಿಲ್ದಾಣದ ಬಳಿ ನಡೆದಿದೆ.

Advertisement

ಅಂಗಡಿ ಮಾಲೀಕ ಗೈಬುಸಾಬ್ ಮುಲ್ಲಾ (34) ಹತ್ಯೆಯಾದ ದುರ್ದೈವಿ. ಮುಸ್ತಕಾ ಜಂಗಿ(22) ಕೊಲೆ ಮಾಡಿದ ಆರೋಪಿ.

ಘಟನೆ: ಪಟ್ಟಣದ ಬಸ್ ನಿಲ್ದಾಣ ಬಳಿಯಿರುವ ಎಗ್​ರೈಸ್ ಮತ್ತು ಕಬಾಬ್ ಅಂಗಡಿಗೆ ಭಾನುವಾರ ಆರೋಪಿ ಮುಸ್ತಾಕ ಜಂಗಿ ಎಂಬ ಯುವಕ ಎಗ್​ರೈಸ್ ತಿಂದು ಕಬಾಬ್ ಕೇಳಿದ್ದಾನೆ ಆಗ ಕಬಾಬ್ ಖಾಲಿ ಆಗಿದೆ ಎಂದು ಅಂಗಡಿ ಮಾಲೀಕ ಗೈಬುಸಾಬ್ ಮುಲ್ಲಾ ಹೇಳಿದ್ದಾರೆ, ಇದರಿಂದ ಸಿಟ್ಟುಗೊಂಡ ಯುವಕ ಮುಸ್ತಾಕ ಜಂಗಿ ಅಂಗಡಿ ಮಾಲೀಕನಿಗೆ ಅವಾಚ್ಯ ಪದ ಬಳಿಸಿದ್ದಾನೆ,ಅವಾಚ್ಯ ಪದ ಬಳಸಬೇಡ ಎಂದು ಮಾಲೀಕ ಹೇಳಿದ್ದಾನೆ ನಂತರ ಅಲ್ಲಿಂದ ಹೊರಟ ಹೋದ ಆರೋಪಿ ಯುವಕ ಮುಸ್ತಾಕ ಜಂಗಿ ಮರಳಿ ಬಂದು ರಾತ್ರಿ 9.30ರ ಸುಮಾರಿಗೆ ಮನೆಗೆ ಹೋಗಲು ಸಿದ್ದತೆ ನಡೆಸಿದ್ದ ಅಂಗಡಿ ಮಾಲೀಕ ಗೈಬುಸಾಬ ಮುಲ್ಲಾ ಅವರಿಗೆ ಚಾಕುವಿನಿಂದ ಕೊಲೆ ಮಾಡಿದ್ದಾನೆ ಎಂದು ಹಮೀದ ಹುಸೇನ ಕೊಣ್ಣೂರು ಎಂಬುವವರು ಅಮೀನಗಡ ಪೋಲಿಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

ಘಟನಾ ಸ್ಥಳಕ್ಕೆ ಎಸ್.ಪಿ ಅಮರನಾಥ ರೆಡ್ಡಿ,ಹೆಚ್ಚುವರಿ ಎಸ್.ಪಿ ಪ್ರಸನ್ನ್ ದೇಸಾಯಿ, ಡಿಎಸಪಿ ಪ್ರಭುಗೌಡ ಕಿರೇದಳ್ಳಿ,ಸಿಪಿಐ ಗುರುಶಾಂತ ದಾಶ್ಯಾಳ,ಅಮೀನಗಡ ಪಿಎಸೈ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next