Advertisement

ಬಿಸಿಸಿಐನಿಂದ 2023ರ ವಿಶ್ವಕಪ್‌ ಆತಿಥ್ಯ ಕಿತ್ತುಕೊಳ್ಳುವುದಿಲ್ಲ

12:30 AM Feb 01, 2019 | Team Udayavani |

ನವದೆಹಲಿ: ಭಾರತಕ್ಕೆ ನೀಡಲ್ಪಟ್ಟಿರುವ 2021ರ ಚಾಂಪಿಯನ್ಸ್‌ ಟ್ರೋಫಿ ಮತ್ತು 2023ರ ಟಿ20 ಏಕದಿನ ವಿಶ್ವಕಪ್‌ ಆತಿಥ್ಯವನ್ನು ಹಿಂತೆಗೆದುಕೊಳ್ಳುವುದಿಲ್ಲವೆಂದು ಐಸಿಸಿ (ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ) ಸಿಇಒ ಡೇವಿಡ್‌ ರಿಚಡ್ಸನ್‌ ಖಚಿತವಾಗಿ ಹೇಳಿದ್ದಾರೆ. 

Advertisement

2016ರಲ್ಲಿ ಭಾರತದಲ್ಲಿ ನಡೆದ ಟಿ20 ವಿಶ್ವಕಪ್‌ಗೆ ಭಾರತ ಸರ್ಕಾರ ತೆರಿಗೆ ವಿನಾಯ್ತಿ ನೀಡಿರಲಿಲ್ಲ. ಇದರಿಂದ ಸಿಟ್ಟಾಗಿದ್ದ ಐಸಿಸಿ, ಪರಿಹಾರವಾಗಿ 161 ಕೋಟಿ ರೂ.ಗಳನ್ನು ಬಿಸಿಸಿಐ ತಾನೇ ಪಾವತಿ ಮಾಡಬೇಕು, ಇಲ್ಲವೇ 2023ರ ವಿಶ್ವಕಪ್‌ ಆತಿಥ್ಯ ಕಳೆದುಕೊಳ್ಳಲು ಸಿದ್ಧವಾಗಬೇಕು ಎಂದು ಸ್ಪಷ್ಟವಾಗಿಯೇ ಹೇಳಿತ್ತು.

ಐಸಿಸಿ ತಾನು ಆಯೋಜಿಸುವ ಕೂಟದಿಂದ ಬಂದ ಎಲ್ಲ ಆದಾಯವನ್ನೂ ಮರಳಿ ಕ್ರೀಡೆಗೇ ನೀಡುತ್ತದೆ. ತೆರಿಗೆ ವಿನಾಯ್ತಿ ನೀಡುವುದರಿಂದ ಹೆಚ್ಚು ಆದಾಯ ಸೃಷ್ಟಿಸಲು ಸಾಧ್ಯವಾಗದ ವೆಸ್ಟ್‌ ಇಂಡೀಸ್‌ನಂತಹ ರಾಷ್ಟ್ರಗಳಿಗೆ ಸಹಾಯವಾಗುತ್ತದೆ. ಈಗಲೂ ನಮಗೆ ಸಮಯವಿದೆ. ಭಾರತದಲ್ಲಿ ನಡೆಯುವ ಕೂಟಗಳಿಗೆ ತೆರಿಗೆ ವಿನಾಯ್ತಿ ಪಡೆಯುವ ಭರವಸೆಯಿದೆ ಎಂದು ರಿಚಡ್ಸìನ್‌ ಹೇಳಿದ್ದಾರೆ. ರಿಚಡ್ಸìನ್‌ ಹೇಳಿಕೆಯಿಂದ ಆತಿಥ್ಯ ಕಳೆದುಕೊಳ್ಳುವ ಭೀತಿಯಲ್ಲಿರುವ ಬಿಸಿಸಿಐಗೆ ಭಾರೀ ಬಿಡುಗಡೆ ಸಿಕ್ಕಂತಾಗಿದೆ.
 

Advertisement

Udayavani is now on Telegram. Click here to join our channel and stay updated with the latest news.

Next