Advertisement

ಕಾರ್ಮಿಕನಿಂದ ಶೌಚಗುಂಡಿ ಸ್ವಚ್ಛಗೊಳಿಸಿದ ಶಿಕ್ಷಣಾಧಿಕಾರಿ

07:00 AM Jul 03, 2018 | Team Udayavani |

ಕುಣಿಗಲ್‌: ಮಲಹೊರುವ ಪದ್ಧತಿಯನ್ನು ಸರ್ಕಾರ ನಿಷೇಧಿಸಿದರೂ ಸರ್ಕಾರಿ ಅಧಿಕಾರಿಯೊಬ್ಬರು ಇದಕ್ಕೆ ಪ್ರಚೋದಿಸಿರುವ ಘಟನೆ ಪಟ್ಟಣದ ಮಲ್ಲಿಪಾಳ್ಯದಲ್ಲಿ ಬೆಳಕಿಗೆ ಬಂದಿದೆ.

Advertisement

ಹಾಸನ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಕೃಷ್ಣ ಅವರು ಮಲ್ಲಿಪಾಳ್ಯದಲ್ಲಿ ವಾಸವಾಗಿದ್ದು ಅವರ ಮನೆಯ ಶೌಚಾಲಯಕ್ಕೆ ಶೌಚಗುಂಡಿ ನಿರ್ಮಿಸಿಕೊಂಡಿಲ್ಲ.ಆದ್ದರಿಂದ ಅವರು ತಮ್ಮ ಮನೆಯ ಶೌಚವನ್ನು ಚರಂಡಿಗೆ ಬಿಟ್ಟಿರುತ್ತಾರೆ ಎಂಬ ಆರೋಪವಿದೆ.

ಅವರ ಮನೆಯ ಶೌಚದ ಪೈಪ್‌ ಅನ್ನು ಕಾರ್ಮಿಕರಿಂದ ದುರಸ್ತಿ ಮಾಡಿಸಿದ್ದಾರೆ. ಮಲಹೊರುವ ಪದಟಛಿತಿ ನಿಷೇಧವಿದ್ದರೂ ಅದನ್ನು ಗಾಳಿಗೆ ತೂರಿ ಕೃಷ್ಣ ಅವರು ಕಾರ್ಮಿಕರಿಂದ ಬರಿಗೈನಲ್ಲಿ ಶೌಚವನ್ನು ಸ್ವಚ್ಛತೆ ಮಾಡಿಸಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡಿದ ಹಿನ್ನೆಲೆಯಲ್ಲಿ ಪುರಸಭೆ ಅಧಿಕಾರಿಗಳು ಶೌಚಾಲಯದ ಪೈಪ್‌ ಬಂದ್‌ ಮಾಡಿಸಿ ನೋಟಿಸ್‌ ಜಾರಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next