Advertisement

ಮಂತ್ರಾಲಯಕ್ಕೆ ತೆರಳುತ್ತಿದ್ದಾಗ ಅಪಘಾತ ವಡ್ಡರ್ಸೆಯ ಮಹಿಳೆ ಸಾವು

08:15 AM Aug 14, 2017 | Team Udayavani |

ಕೋಟ: ಕುಟುಂಬ ಸಮೇತ ಟವೆರೋ ವಾಹನದಲ್ಲಿ ಮಂತ್ರಾಲಯಕ್ಕೆ ತೀರ್ಥಯಾತ್ರೆ ತೆರಳುತ್ತಿದ್ದ ಸಂದರ್ಭ ಅಪಘಾತ ನಡೆದು ಮಹಿಳೆ ಮೃತಪಟ್ಟ ಘಟನೆ ರವಿವಾರ ರಾಯಚೂರಿನ ಮಾನ್ವಿಯಲ್ಲಿ ಸಂಭವಿಸಿದೆ.

Advertisement

ಕೋಟ ಸಮೀಪ ವಡ್ಡರ್ಸೆಯ ನಿವಾಸಿ ಸುಗುಣ ಶೆಟ್ಟಿ (40) ಮೃತಪಟ್ಟ ಮಹಿಳೆ. ಅವರು ನೇರಳಕಟ್ಟೆಯಲ್ಲಿರುವ ಗಂಡ ಶಂಕರ ಶೆಟ್ಟಿಯವರ ಕುಟುಂಬದವರೊಂದಿಗೆ  ಒಂಬತ್ತು ಮಂದಿ  ಜತೆಯಾಗಿ ಶನಿವಾರ ಸಂಜೆ ಮಂತ್ರಾಲಯ ಯಾತ್ರೆಗೆ ಹೊರಟಿದ್ದು, ರವಿವಾರ ಬೆಳಗಿನ  ಜಾವ ರಾಯಚೂರು ಬಳಿಯ ಮಾನ್ವಿ ಎಂಬಲ್ಲಿ ಇವರು ಪ್ರಯಾಣಿಸುತ್ತಿದ್ದ ವಾಹನ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿಯಾಗಿ ಈ ಘಟನೆ  ನಡೆದಿದೆ.

ಪ್ರಯಾಣಿಕರಲ್ಲಿ  ಆನಂದ ಶೆಟ್ಟಿ, ಚಂದ್ರಮತಿ ಶೆಟ್ಟಿ ಅವರು ಗಂಭೀರ ಗಾಯಗೊಂಡಿದ್ದು, ರಾಯಚೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರಿಗೆ ಸಣ್ಣ ಪುಟ್ಟ ಗಾಯವಾಗಿದೆ ಹಾಗೂ ವಾಹನದ ಚಾಲಕ ಸಾಲಿಗ್ರಾಮ,ಕಾರ್ಕಡದ ಮಹೇಶ್‌ಗೆ ಕೂಡ ಸಣ್ಣ-ಪುಟ್ಟ ಗಾಯಗಳಾಗಿದೆ.
ಸುಗುಣಾ ಶೆಡ್ತಿ ತನ್ನ ಮನೆ ವಡ್ಡರ್ಸೆಯಲ್ಲಿ ಕೃಷಿ ಕಾರ್ಯ ನಿರ್ವಹಿಸುತ್ತಿದ್ದರು. ಪತಿ ಶಂಕರ ಶೆಟ್ಟಿ ಶಿವಮೊಗ್ಗದಲ್ಲಿ

 ಹೋಟೆಲ್‌ ಕೆಲಸ ನಿರ್ವಹಿಸ್ತುತಿದ್ದರು. ಮೃತರು ಪತಿ ಹಾಗೂ ಪುತ್ರ, ಪುತ್ರಿಯನ್ನು ಅಗಲಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಅವರ  ಕುಟುಂಬದವರು ರಾಯಚೂರಿಗೆ ತೆರಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next