Advertisement

ಜೋಪಡಿಯಲ್ಲಿ ಸಿಕ್ಕ ವಿವಿಪ್ಯಾಟ್ ಯಂತ್ರಕ್ಕೂ ಚುನಾವಣೆಗೂ ಸಂಬಂಧವಿಲ್ಲ..

05:11 PM May 21, 2018 | Team Udayavani |

ಬೆಂಗಳೂರು: ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಬಳಿಯ ರಾಷ್ಟ್ರೀಯ ಹೆದ್ದಾರಿ ಕಾರ್ಮಿಕರ ಜೋಪಡಿಯಲ್ಲಿ ಸಿಕ್ಕ ವಿವಿ ಪ್ಯಾಟ್ ಯಂತ್ರಕ್ಕೂ, ಚುನಾವಣೆಗೂ ಯಾವುದೇ ಸಂಬಂಧವಿಲ್ಲ. ವಿವಿಪ್ಯಾಟ್ ನಲ್ಲಿ ಖಾಲಿ ಬಾಕ್ಸ್ ಗಳಷ್ಟೇ ಸಿಕ್ಕಿವೆ  ಎಂದು ರಾಜ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

Advertisement

ಮನಗೂಳಿ ಬಳಿಯ ಕಾರ್ಮಿಕರ ಜೋಪಡಿಯಲ್ಲಿ ವಿವಿ ಪ್ಯಾಟ್ ಪತ್ತೆಯಾಗಿದ್ದು, ಇದನ್ನು ರಸ್ತೆ ಬದಿ ಎಸೆದವರು ಯಾರು ಎಂಬ ಬಗ್ಗೆ ಅನುಮಾನಗಳು ಹುಟ್ಟಿಕೊಂಡಿದ್ದವು. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಆರೋಪ, ಪ್ರತ್ಯಾರೋಪಕ್ಕೂ ಕಾರಣವಾಗಿತ್ತು.

ಈ ಹಿನ್ನೆಲೆಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಚುನಾವಣಾಧಿಕಾರಿ ಕುಮಾರ್ ಅವರು, ಮನಗೂಳಿಯಲ್ಲಿ ಸಿಕ್ಕ ವಿವಿಪ್ಯಾಟ್ ನಲ್ಲಿ ಯಾವುದೇ ಎಲೆಕ್ಟ್ರಾನಿಕ್ ಯಂತ್ರಗಳಿರಲಿಲ್ಲ. ಅದರಲ್ಲಿ ಚುನಾವಣೆಗೆ ಬಳಸುವ ಯಾವುದೇ ಯಂತ್ರಗಳು ಇರಲಿಲ್ಲವಾಗಿತ್ತು ಎಂದು ಸ್ಪಷ್ಟಪಡಿಸಿದರು.

ಹೀಗಾಗಿ ಸಾರ್ವಜನಿಕರು ಈ ಬಗ್ಗೆ ತಪ್ಪು ತಿಳಿದುಕೊಳ್ಳದೇ, ಊಹಾಪೋಹದ ಸುದ್ದಿಗಳನ್ನು ಹರಡಿಸಬಾರದು ಎಂದು ವಿನಂತಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next