Advertisement

ಅಹ್ಮದ್‌ ಪಟೇಲ್‌ಗೆ ಗೆಲುವು : ಕಾಂಗ್ರೆಸ್‌ ವಿಜಯೋತ್ಸವ

08:40 AM Aug 11, 2017 | Team Udayavani |

ಮಡಿಕೇರಿ: ಗುಜರಾತ್‌ನಲ್ಲಿ ನಡೆದ ರಾಜ್ಯಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅಹ್ಮದ್‌ ಪಟೇಲ್‌ ಗೆಲುವಿಗೆ ಮಡಿಕೇರಿ ನಗರ ಕಾಂಗ್ರೆಸ್‌ ಸಮಿತಿ ವಿಜಯೋ ತ್ಸವ ಆಚರಿಸಿ ಸಂಭ್ರಮಿಸಿತು.

Advertisement

ನಗರದ ಇಂದಿರಾಗಾಂಧಿ ವೃತ್ತದಲ್ಲಿ ನಗರ ಕಾಂಗ್ರೆಸ್‌ ಅಧ್ಯಕ್ಷ ಕೆ.ಯು. ಅಬ್ದುಲ್‌ ರಜಾಕ್‌ ಅವರ ನೇತೃತ್ವದಲ್ಲಿ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸೋನಿಯಾಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅಹ್ಮದ್‌ ಪಟೇಲ್‌ ಪರ ಘೋಷಣೆಗಳನ್ನು ಕೂಗಿ, ಪಟಾಕಿ ಸಿಡಿಸಿ ಹರ್ಷ ವ್ಯಕ್ತಪಡಿಸಿದರು. 

ವಿ. ಪ. ಮಾಜಿ ಸದಸ್ಯ  ಸಿ.ಎಸ್‌. ಅರುಣ್‌ ಮಾಚಯ್ಯ, ಜಿಲ್ಲಾ ಕಾಂ. ಅಧ್ಯಕ್ಷ ಮುಕ್ಕಾಟಿರ ಶಿವು ಮಾದಪ್ಪ, ವಕ್ತಾರ ಟಾಟು ಮೊಣ್ಣಪ್ಪ, ರಾಜೀವ್‌ ಗಾಂಧಿ ಪಂ. ರಾಜ್‌ ಸಂಘಟನೆಯ ಜಿಲ್ಲಾ ಸಂಯೋಜಕ‌ ತೆನ್ನಿರ ಮೈನ, ಮೂಡ ಅಧ್ಯಕ್ಷ ಚುಮ್ಮಿ ದೇವಯ್ಯ, ಪ್ರಮುಖರಾದ ಕಾನೆಹಿತ್ಲು ಮೊಣ್ಣಪ್ಪ, ಅಪ್ರು ರವೀಂದ್ರ, ಉಸ್ಮಾನ್‌, ಎಸ್‌ಸಿ- ಎಸ್‌ಟಿ ಘಟಕದ ಸತೀಶ್‌ಕುಮಾರ್‌ ಮತ್ತಿತರರು ಈ ಸಂದರ್ಭ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next