Advertisement
ಅವರು ಜು. 3ರಂದು ಕಡಿಯಾಳಿ ಪರಿಸರದಲ್ಲಿ ಜರಗಿದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.ಉಡುಪಿ ನಗರಸಭೆಯ ಅಧಿವೇಶನದಲ್ಲಿ ಆಡಳಿತಾ ರೂಢಾ ಕಾಂಗ್ರೆಸ್ ಪಕ್ಷದ ನಗರಸಭೆಯ ಅವರದೇ ಪಕ್ಷದ ಸದಸ್ಯರಾದ ಗೀತಾ ಶೇಟ್ ಅವರು ಸಾಕ್ಷಿ ಹೇಳಲು ಕರೆದ ಹಿನ್ನಲೆಯಲ್ಲಿ ತಾವು ನಗರಸಭೆಗೆ ಆಗಮಿಸಿದ್ದೆವು. ಸಭೆಯ ಒಳಗೆ ಹೋಗುವಾಗ ಯಾವುದೇ ಆಕ್ಷೇಪವನ್ನು ಎತ್ತದ ಇತರ ಕಾಂಗ್ರೆಸ್ ಸದಸ್ಯರು ಸ್ಪಷ್ಟೀಕರಣ ನೀಡಲು ಮೈಕ್ ಕೈಗೆತ್ತಿಕೊಳ್ಳುತ್ತಿದ್ದಂತೆಯೇ ಏಕಾಏಕಿ ತಮ್ಮ ಮೇಲೆ ಬಿದ್ದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು ಅಕ್ಷಮ್ಯ ಅಪರಾಧವಾಗಿದೆ. ಬಿಜೆಪಿ ಸದಸ್ಯರು ಅಂದು ತಮ್ಮನ್ನು ರಕ್ಷಿಸದಿದ್ದರೆ ತಾವಲ್ಲೇ ಸತ್ತು ಹೋಗುತ್ತಿದ್ದೆವು. ಈ ರೀತಿ ವಿನಾಕಾರಣ ಹಲ್ಲೆ ಮಾಡಿದವರಿಗೆ ಶಿಕ್ಷೆಯಾಗಲೇ ಬೇಕು ಎಂದು ಅವರು ಆಗ್ರಹಿಸಿದರು.
ಆಡಳಿತ ರೂಢಾ ಪಕ್ಷದ ಸದಸ್ಯರು ತಮ್ಮ ವಾರ್ಡಿನ ನಾಗರಿಕರ ಮೇಲೆ ಹಲ್ಲೆಯಾಗುವಾಗ ತಡೆಯಲು ಹೋದಾಗ ಅವರ ಸೀರೆ ಬಿಚ್ಚುವತನಕ ಅವರ ಸದಸ್ಯರೇ ಹಲ್ಲೆ ಮಾಡುತ್ತಾರೆ ಎಂದರೆ ಇದು ಗೂಂಡಾ ರಾಜ್ಯವೇ ಸರಿ ಎಂದು ಮಾಜಿ ಶಾಸಕ ರಘುಪತಿ ಭಟ್ ಹೇಳಿದರು.
Related Articles
Advertisement
ಜಿಲ್ಲಾ ಉಸ್ತುವಾರಿ ಸಚಿವರು ಭ್ರಷ್ಟರಾಗದಿದ್ದರೂ ಅವರು ಭ್ರಷ್ಟರಿಗೆ ಪ್ರೋತ್ಸಾಹ ನೀಡುತ್ತಿರುವುದು ಶೋಚನೀಯ. ಕಡಿಯಾಳಿ ದೇವಸ್ಥಾನದ ಸತ್ಯಾಸತ್ಯತೆ ತಿಳಿದಿದ್ದರೂ ಮೌನ ವಹಿಸಿರುವುದು ಅತ್ಯಂತ ಬೇಸರದ ವಿಷಯವಾಗಿದೆ. ಈ ಹಿನ್ನಲೆಯಲ್ಲಿ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಹಾಗೂ ಮೊನ್ನೆ ನಾಗರಿಕರ ಮೇಲೆ ನಡೆದ ಹಲ್ಲೆಯ ಬಗ್ಗೆ ಸೂಕ್ತ ತನಿಖೆಯಾಗಬೇಕೆಂದು ಬಳಕೆದಾರರ ವೇದಿಕೆಯ ದಾಮೋದರ ಐತಾಳ್ ಆಗ್ರಹಿಸಿದರು.ಸ್ಥಳೀಯರಾದ ಶ್ರೀನಿವಾಸ ಉಪಾಧ್ಯಾಯ, ವಸಂತ್ ಭಟ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.