Advertisement

ಹಿರಿಯ ನಟ ವೈಜನಾಥ್ ಬಿರಾದಾರ್ ಅವರಿಗೂ ಸಿಗಲಿ ಪದ್ಮ ಪುರಸ್ಕಾರ

03:50 PM Jul 16, 2021 | Team Udayavani |

ಸುಮಾರು 500 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ವೈಜನಾಥ್ ಬಿರಾದಾರ್ ಅವರಿಗೂ ಸಿಗಲಿ ಪದ್ಮ ಪುರಸ್ಕಾರ ಎನ್ನುವ ಅಭಿಯಾನ ಕನ್ನಡ ಸಿನಿ ರಸಿಕರಿಂದ ಶುರುವಾಗಿದೆ.

Advertisement

ಬಿರಾದಾರ್ ಬೀದರ್ ಜಿಲ್ಲೆಯ ಪ್ರತಿಭೆ. ಒಂದರ್ಥದಲ್ಲಿ ಬೆಂಕಿಯಲ್ಲಿ ಅರಳಿದ ಹೂವು. ಬಡತನದಿಂದ ಕೂಡಿದ ಕುಟುಂಬದಲ್ಲಿ ಜನಸಿದ ಈತ ಬೆಳ್ಳಿ ಪರದೆ ಮೇಲೆ ಮಿಂಚಬೇಕೆಂದೆ ಕೆಂಪು ಬಸ್ ಹತ್ತಿ ಬೆಂಗಳೂರಿಗೆ ಬಂದವರು. ಅವಕಾಶಕ್ಕಾಗಿ ಬೀದಿ ಬೀದಿ ಅಲೆದವರು.

ಕನ್ನಡದ ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳ ಮೂಲಕ ಬದುಕು ಕಟ್ಟಿಕೊಂಡ ಬಿರಾದಾರ್ ಇದುವರೆಗೆ 500 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಬಿಸಿಲು ಕುದುರೆ’ ಸಿನಿಮಾ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದವರು. ಈ ಚಿತ್ರದಲ್ಲಿ ಇವರ ಅಭಿನಯಕ್ಕೆ ಹಲವು ಪ್ರಶಸ್ತಿಗಳು ಬಂದಿವೆ. ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರೂ ಬಿರಾದಾರ್ ಮನೋಜ್ಞ ಅಭಿನಯ ಮೆಚ್ಚಿಕೊಂಡಿದ್ದಿದೆ. ಕನ್ನಡ ಚಿತ್ರರಂಗಕ್ಕೆ ಇಷ್ಟೆಲ್ಲ ಕೊಡುಗೆ ನೀಡಿರುವ ಬಿರಾದಾರ್ ಅವರಿಗೆ ಪದ್ಮ ಪುರಸ್ಕಾರ ಸಿಗಲೇಬೇಕು ಎನ್ನುವುದು ಕನ್ನಡ ಚಿತ್ರರಂಗದ ಸಿನಿ ಪ್ರೇಮಿಗಳ ಬಯಕೆಯಾಗಿದೆ.

ದೇಶದ ಅತ್ಯುನ್ನತ ಗೌರವಗಳಾದ ಪದ್ಮಭೂಷಣ, ಪದ್ಮವಿಭೂಷಣ ಹಾಗೂ ಪದ್ಮಶ್ರೀ ಪ್ರಶಸ್ತಿಗಳಿಗೆ ಮುಂದಿನ ವರ್ಷ ಯಾರು ಭಾಜನರಾಗಬೇಕು ಎಂಬ ಆಯ್ಕೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಜನತೆಗೇ ನೀಡಿರುವ ಹಿನ್ನೆಲೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಬಿರಾದಾರ್ ಅವರ ಹೆಸರು ಕೇಳಿ ಬಂದಿದೆ.

ಇನ್ನು ಕನ್ನಡ ಚಿತ್ರರಂಗದ ಮತ್ತೋರ್ವ ಪ್ರತಿಭಾವಂತ ನಟ, ಅಭಿನಯ ಬ್ರಹ್ಮ ಅನಂತ್ ನಾಗ್ ಅವರಿಗೂ ಪದ್ಮ ಪ್ರಶಸ್ತಿ ಸಿಗಬೇಕೆಂದು ಅಭಿಯಾನ ಶುರುವಾಗಿದೆ. ಅನಂತ್ ನಾಗ್ ಹಾಗೂ ವೈಜನಾಥ್ ಬಿರಾದಾರ ಇಬ್ಬರಿಗೂ ಪದ್ಮ ಗೌರವ ಸಿಗಲಿ ಎಂದು ಕನ್ನಡಿಗರ ಕೋರಿಕೆಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next