Advertisement

ಹುಮನಾಬಾದ ವೀರಭದ್ರೇಶ್ವರ ರಥೋತ್ಸವ ವೈಭವ

09:30 AM Jan 28, 2019 | |

ಹುಮನಾಬಾದ: ನಗರದಲ್ಲಿ ರವಿವಾರ ಕಲ್ಯಾಣ ಕರ್ನಾಟಕದ ಇತಿಹಾಸ ಪ್ರಸಿದ್ಧ, ಸರ್ವಧರ್ಮ ಸಮನ್ವಯತೆ ಖ್ಯಾತಿಯ ಶ್ರೀ ವೀರಭದ್ರೇಶ್ವರ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ನೆರವೇರಿತು.

Advertisement

ಪಲ್ಲಕ್ಕಿ ಉತ್ಸವದೊಂದಿಗೆ ಆಗಮಿಸಿದ ಹಿರೇಮಠದ ಶ್ರೀ ರೇಣುಕ ಗಂಗಾಧರ ಸ್ವಾಮೀಜಿ ಅವರನ್ನು ಭಕ್ತರು ವಾದ್ಯವೃಂದದೊಂದಿಗೆ ರಥದತ್ತ ಕರೆತಂದರು. ರಥದ ಮುಂಭಾಗದ ಮಂಟಪದಲ್ಲಿ ಬೈವೇದ್ಯಕ್ಕಾಗಿ ಇಡಲಾದ ಎಳ್ಳಿನ ಹೋಳಿಗೆ, ಜೋಳದ ಅನ್ನ ಮೊದಲಾದವುಗಳ ಮೇಲೆ ಹಾಯ್ದು ಸ್ವಾಮೀಜಿ ರಥದಲ್ಲಿ ಆಸೀನರಾಗುತ್ತಿದ್ದ ಹಾಗೆ ಭಕ್ತರಿಂದ ಶ್ರೀ ವೀರಭದ್ರೇಶ್ವರ ಮಹಾಜರಾಕೀ ಜೈ ಎಂಬ ಘೋಷಣೆ ಮುಗಿಲುಮುಟ್ಟಿತು. ಬಳಿಕ ಕಲಬುರಗಿ ಜಿಲ್ಲೆಯ ಶರಣಬಸಪ್ಪ ಕಲ್ಯಾಣಿ ಅವರು ರಥ ಹತ್ತಿದ್ದಾಗ ಭಕ್ತರಿಂದ ಕರತಾಡನ ಕೇಳಿಸುತಿದ್ದಂತೆ ರಥೋತ್ಸವ ಆರಂಭಗೊಂಡಿತು.

ಭಕ್ತರು ರಥದತ್ತ ಬಾಳೆಹಣ್ಣು, ಪೇಡಾ, ಖಾರಿಕ ಮೊದಲಾದ ಸಿಹಿ ತಿನಿಸು ಸಮರ್ಪಿಸಿದರೆ ಇನ್ನೂ ಕೆಲವರು ಹಣವನ್ನು ರಥಕ್ಕೆ ಸಮರ್ಪಿಸಿ ಭಕ್ತಿಸೇವೆ ಸಲ್ಲಿಸಿದರು. ಅಲ್ಲದೇ ವೀರಭದ್ರೇಶ್ವರ ಸ್ವಾಮಿ ಕೃಪೆಯಿಂದ ತಮ್ಮ ಇಷ್ಟಾರ್ಥ ಈಡೇರಿದ್ದಕ್ಕೆ ಭಕ್ತಾದಿಗಳು ವಿಭಿನ್ನ ರೀತಿಯಲ್ಲಿ ತಮ್ಮ ಹರಿಕೆ ತೀರಿಸಿದರು.

ರಥವು ಹಳೆ ತಹಶೀಲ್ದಾರ್‌ ಕಚೇರಿ ಮುಂಭಾಗದ ಬಸವಣ್ಣ ಕಟ್ಟೆ ತಲುಪಿದ ನಂತರ ವೀರಭದ್ರೇಶ್ವರ ಪಲ್ಲಕಿಯನ್ನು ದೇವಸ್ಥಾನ ಕಟ್ಟೆ ಹತ್ತಿಸಿದಾಗ, ಸ್ವಾಮೀಜಿ ಭಕ್ತರತ್ತ ಎಸೆದ ಪ್ರಸಾದ ಹಿಡಿಯಲು ಭಕ್ತರು ಮುಂದಾದರು.

ಸಚಿವರಿಂದ ಕಲಾ ಪ್ರದರ್ಶನ ವೀಕ್ಷಣೆ: ರಥೋತ್ಸವ ಆರಂಭಕ್ಕೆ ಮುನ್ನ ಶಿವಮೊಗ್ಗ ಜಿಲ್ಲೆ ಸಾಗರದ ಶ್ರೀ ಆದಿಶಕ್ತಿ ಮಹಿಳಾ ಡೊಳ್ಳು ಕುಣಿತ ತಂಡದ ನೃತ್ಯ, ಸೊನ್ನಲಪುರದ ಜೋಡುಕುದುರೆ ನೃತ್ಯ, ಬೊಂಬೆ ಕುಣಿತ, ನಂದಿಕೋಲು ಕುಣಿತವನ್ನು ಸಚಿವ ರಾಜಶೇಖರ ಪಾಟೀಲ ವೀಕ್ಷಿಸಿ, ಕಲಾತಂಡಗಳನ್ನು ಪ್ರೋತ್ಸಾಹಿಸಿದರು.

Advertisement

ವಿಧಾನ ಪರಿಷತ್‌ ಸದಸ್ಯ ಡಾ| ಚಂದ್ರಶೇಖರ ಪಾಟೀಲ, ದೇವಸ್ಥಾನ ಸಮಿತಿ ಅಧ್ಯಕ್ಷ ವೀರಣ್ಣ ಪಾಟೀಲ, ತಹಶೀಲ್ದಾರ್‌ ದೇವೇಂದ್ರ ಪಾಣಿ, ಪಿಕೆಪಿಎಸ್‌ ಅಧ್ಯಕ್ಷ ಶರಣಪಗೌಡ ಪಾಟೀಲ, ಜಿಲ್ಲಾ ಸಹಕಾರ ಬ್ಯಾಂಕ್‌ ಉಪಧ್ಯಕ್ಷ ಭೀಮರಾವ ಪಾಟೀಲ, ಅಗ್ನಿಕುಂಡ ಸಮಿತಿ ಅಧ್ಯಕ್ಷ ಡಿ.ಆರ್‌. ಚಿದ್ರಿ, ಪಲ್ಲಕ್ಕಿ ಉತ್ಸವ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಮಳಶಟ್ಟಿ ಇದ್ದರು. ಇದೇ ವೇಳೆ ಜಾತ್ರಾ ಉತ್ಸವ ಯಶಸ್ಸಿಗೆ ಶ್ರಮಿಸಿದವರನ್ನು ಸಚಿವ ರಾಜಶೇಖರ ಪಾಟೀಲ ಸನ್ಮಾನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next