Advertisement

ಪಾರ್ಕ್ ಉದ್ಘಾಟನಾ ಸಮಾರಂಭಕ್ಕೆ ಶಾಲಾ ಮಕ್ಕಳನ್ನು ಕರೆಸಿದರು

02:34 PM Oct 25, 2019 | keerthan |

ಗಂಗಾವತಿ: ನಗರದಲ್ಲಿ ಅಮೃತ ಸಿಟಿಯೋಜನೆಯಡಿ ನಿರ್ಮಿಸಿದ ಪಾರ್ಕ್ ಗಳ ಉದ್ಘಾಟನೆಯನ್ನು ಸಂಸದ ಕರಡಿ ಸಂಗಣ್ಣ ಶಾಸಕ ಪರಣ್ಣ ಮುನವಳ್ಳಿ ನಗರಯೋಜನ ನಿರ್ದೇಶಕ ಗಂಗಾಧರರಡ್ಡಿ ಪೌರಾಯುಕ್ತ ಡಾ.ದೊಡ್ಮನಿ ಸೇರಿ ಹಲವು ಜನಪ್ರತಿನಿಧಿಗಳು ಅಧಿಕಾರಿಗಳು ಪಾಲ್ಗೊಂಡಿದ್ದರು.

Advertisement

ಶಾಲಾಮಕ್ಕಳ ಬಳಕೆ: ಆನೆಗೊಂದಿ ರಸ್ತೆ ಮಹಾಬಲೇಶ್ವರ ಲೇಔಟ್ ನಲ್ಲಿ ನಿರ್ಮಿಸಿದ ನೂತನ ಪಾರ್ಕ್ ಉದ್ಘಾಟನಾ ಕಾರ್ಯಕ್ರಮಕ್ಕೆ ವಿರೂಪಾಪೂರ ತಾಂಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 25ಕ್ಕೂ ಹೆಚ್ಚು ಮಕ್ಕಳನ್ನು ಕರೆಸಲಾಗಿತ್ತು ಬೆಳ್ಳಿಗ್ಗೆ 11ಗಂಟೆಯಿಂದ ಮಕ್ಕಳು ಕಾರ್ಯಕ್ರಮದಲ್ಲಿ ಕೂರಿಸಲಾಗಿತ್ತು.

ಕಾರ್ಯಕ್ರಮಕ್ಕೆ ಆಗಮಿಸುವ ಜನಪ್ರತಿನಿಧಿಗಳ ಹತ್ತಿರ ಶಾಲಾ ಕಟ್ಟಡದ ಜಾಗ ಕೇಳಲು ಮಕ್ಕಳನ್ನು ಕರೆ ತರಲಾಗಿದೆ ಎಂದು ತಾಂಡದ ನಿವಾಸಿಗಳು ತಿಳಿಸಿದ್ದಾರೆ.

ಸಮಸ್ಯೆ ಕೇಳಲು ಪಾಲಕರು ಬರಬೇಕಾಗಿದ್ದು ಮಕ್ಕಳನ್ನು ಕರೆತರುವ ಮೂಲಕ  ಶಾಲೆಯವರು ಇಲಾಖೆ ನಿಯಮಗಳನ್ನು ಉಲ್ಲಂಘಿಸುವುದು ಕಂಡುಬರುತ್ತಿದೆ. ಯಾವುದೇ ಕಾರ್ಯಕ್ರಮ ಕ್ಕೆ ಶಾಲಾಮಕ್ಕಳ ಬಳಕೆ ನಿಷೇಧ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next