Advertisement

ಖಾಸಗಿಯವರಿಂದ ಆಧಾರ್‌ ಬಳಕೆ: ಸುಪ್ರೀಂ ಕಳವಳ

03:45 AM Jan 06, 2017 | Team Udayavani |

ನವದೆಹಲಿ: ಆಧಾರ್‌ ಯೋಜನೆ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ತ್ವರಿತ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ. ಆದರೆ, ಆಧಾರ್‌ ಮಾಹಿತಿಯನ್ನು ಖಾಸಗಿ ಸಂಸ್ಥೆಗಳಿಂದ ಸಂಗ್ರಹಿಸುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದೆ.

Advertisement

ಆಧಾರ್‌ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿದ್ದ ಅರ್ಜಿಗಳನ್ನು ತ್ವರಿತವಾಗಿ ವಿಚಾರಣೆ ನಡೆಸಬೇಕು ಎಂದು ಕೋರಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶ ನ್ಯಾ| ಜೆ.ಎಸ್‌. ಖೇಹರ್‌ ಅವರ ಪೀಠ ಈ ಅಭಿಪ್ರಾಯ ಮಂಡಿಸಿದೆ. ಖಾಸಗಿ ಏಜೆನ್ಸಿಗಳು ಬಯೋಮೆಟ್ರಿಕ್‌ ಮಾಹಿತಿ ಪಡೆಯುತ್ತಿವೆ. ಹಾಗಾಗಿ ಈ ಅರ್ಜಿಗಳನ್ನು ತ್ವರಿತವಾಗಿ ವಿಚಾರಣೆ ನಡೆಸಬೇಕು ಎಂದು ಶ್ಯಾಮ್‌ ದಿವಾನ್‌ ಎಂಬುವವರು ಅರ್ಜಿ ಸಲ್ಲಿಸಿದ್ದಾರೆ. ಇತ್ತೀಚೆಗೆ ಹೊಸದಾಗಿ ಸೇವೆ ಆರಂಭಿಸಿದ ಮೊಬೈಲ್‌ ದೂರವಾಣಿ ಕಂಪನಿಯೊಂದು, ಗ್ರಾಹಕನ ಆಧಾರ್‌ ಮಾಹಿತಿ ತಾಳೆ ಮಾಡಿ ಸಿಮ್‌ ಕೊಡುತ್ತಿರುವುದು ಕಂಡುಬಂದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next