Advertisement

ಲಾಲು ಅರ್ಜಿ 10ಕ್ಕೆ ವಿಚಾರಣೆ

10:44 PM Apr 05, 2019 | Team Udayavani |

ಹೊಸದಿಲ್ಲಿ: ಮೇವು ಹಗರಣದ 3 ಪ್ರಕರಣಗಳಲ್ಲಿ ಜಾಮೀನು ನೀಡಬೇಕೆಂದು ಬಿಹಾರದ ಮಾಜಿ ಸಿಎಂ ಲಾಲು ಪ್ರಸಾದ್‌ ಯಾದವ್‌ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂಕೋರ್ಟ್‌ ವಿಚಾರಣೆಗೆ ಅಂಗೀಕರಿಸಿದೆ. ಏ.10ಕ್ಕೆ ಅದರ ವಿಚಾರಣೆ ನಡೆಯಲಿದೆ. ಸಿಜೆ ಐ ರಂಜನ್‌ ಗೊಗೋಯ್‌ ನೇತೃತ್ವದ ನ್ಯಾಯಪೀಠ ಸಿಬಿಐಗೆ ಲಾಲು ಯಾದವ್‌ ಸಲ್ಲಿಸಿರುವ ಅರ್ಜಿಗೆ ಆಕ್ಷೇಪವಿದ್ದರೆ ಏ.9ರ ಒಳಗಾಗಿ ಸಲ್ಲಿಸುವಂತೆಯೂ ಸೂಚನೆ ನೀಡಿದ್ದಾರೆ. ಕೇಂದ್ರದ ಮಾಜಿ ಸಚಿವ ಕಪಿಲ್‌ ಸಿಬಲ್‌ ಲಾಲು ಪ್ರಸಾದ್‌ ಯಾದವ್‌ ಪರವಾಗಿ ವಾದ ಮಂಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next