Advertisement

ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಇಬ್ಬರ ಸಾವು

03:54 AM May 05, 2019 | Team Udayavani |

ಬೆಳ್ತಂಗಡಿ: ಉಜಿರೆ ಸಿದ್ಧವನದ ಸಮೀಪ ರಾಜ್ಯ ಹೆದ್ದಾರಿಯಲ್ಲಿ ಶನಿವಾರ ಸಂಜೆ 4.40ಕ್ಕೆ ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು, ಇಬ್ಬರು ಯುವಕರು ದಾರುಣ ವಾಗಿ ಸಾವಿಗೀಡಾ ಗಿದ್ದಾರೆ.

Advertisement

ಉಜಿರೆ ನಿನ್ನಿಕಲ್ಲು ನಿವಾಸಿ ವಿಘ್ನೇಶ್ (21) ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಂಭೀರ ಗಾಯಗೊಂಡಿದ್ದ ಮಡಂತ್ಯಾರು ನಿವಾಸಿ ಕ್ಷಿತಿಜ್‌ ಜೈನ್‌(24) ಆಸ್ಪತ್ರೆ ದಾರಿ ಮಧ್ಯೆ ಪುಂಜಾಲಕಟ್ಟೆ ತಲುಪುತ್ತಿದ್ದಂತೆ ಕೊನೆಯುಸಿರೆಳೆದರು.

ಕಾರು ಚಲಾಯಿಸುತ್ತಿದ್ದ ಕುರ್ಮಾಣಿ ನಿವಾಸಿ ಹರ್ಷಿತ್‌ ಹಾಗೂ ಜತೆಗಿದ್ದ ಬೆಳ್ತಂಗಡಿ ನಿವಾಸಿ ಸುಶಾಂತ್‌ ಸಣ್ಣಪುಟ್ಟ ಗಾಯದೊಂದಿಗೆ ಪಾರಾಗಿದ್ದಾರೆ.

ಕಾರಿನಲ್ಲಿ ನಾಲ್ವರು ಧರ್ಮ ಸ್ಥಳದಿಂದ ಉಜಿರೆ ಕಡೆ ಪ್ರಯಾ ಣಿಸುತ್ತಿರುವಾಗ ಏಕಾಏಕಿ ಬೃಹದಾ ಕಾರದ ಮರವೊಂದು ಬುಡ ಸಮೇತ ಬಿದ್ದಿದೆ. ಕಾರು ಸಂಪೂರ್ಣ ಜಖಂಗೊಂಡಿದ್ದು, ಏರಬ್ಯಾಗ್‌ ತೆರೆದು ಕೊಂಡ ಪರಿಣಾಮ ಮುಂಬದಿ ಸವಾರ ಹರ್ಷಿತ್‌, ಸುಶಾಂತ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮರ ಬಿದ್ದ ರಭಸಕ್ಕೆ ಓರ್ವನ ತಲೆ ಒಡೆದು ಹೋಗಿದ್ದು, ಕಾರಿನಲ್ಲಿ ರಕ್ತ ಮಡುಗಟ್ಟಿತ್ತು.ದುರಂತ ಸಂಭವಿಸಿದ ಕೂಡಲೇ ಸ್ಥಳೀಯರಾದ ಸಂತೋಷ್‌ ಮತ್ತಿತರರು ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಲು ನೆರವಾದರು.

ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಮೃತದೇಹವನ್ನು ಮಹಜರು ನಡೆಸ ಲಾಯಿತು. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಮೃತ ವಿಘ್ನೇಶ್(21) ಅವರು ಉಜಿರೆ ಬಳಿ ಮೊಬೈಲ್‌ ಅಂಗಡಿ ಯಲ್ಲಿ ಕೆಲಸ ದಲ್ಲಿದ್ದರು. ಕ್ಷಿತಿಜ್‌ ಜೈನ್‌(24) ಅವರು ಮಡಂತ್ಯಾರು ಮಾಲಾಡಿ ನಾವುಂಡ ನಿವಾಸಿ ಜಗದೀಶ್‌ ಜೈನ್‌ ಅವರ ಹಿರಿಯ ಪುತ್ರರಾಗಿದ್ದು, ಉಜಿರೆಯ ಖಾಸಗಿ ಕಾಲೇಜಿನಲ್ಲಿ ಡಿಪ್ಲೊಮಾ ಓದುತ್ತಿದ್ದರು.

ಸಂಚಾರ ವ್ಯತ್ಯಯ
ಅವಘಡ ಸಂಭವಿಸಿದ್ದರಿಂದ ಸುಮಾರು ಒಂದು ಗಂಟೆಗಳ ಕಾಲ ವಾಹನ ಸಂಚಾರ ವ್ಯತ್ಯಯವಾಗಿತ್ತು.ಎರಡೂ ಬದಿ ಗಳಲ್ಲಿ ವಾಹನಗಳು ಸಾಲು ಗಟ್ಟಿ ನಿಂತಿತ್ತು.ರಸ್ತೆಗೆ ಅಡ್ಡವಾಗಿ ಬಿದ್ದಿದ್ದ ಮರವನ್ನು ತೆರವುಗೊಳಿಸಿದ ಸಾರ್ವಜನಿಕರು ವಾಹನ ಸಂಚಾರ ಸುಗಮವಾಗಲು ಸಹ ಕರಿಸಿದರು.ಬೆಳ್ತಂಗಡಿ ಸರ್ಕಲ್‌ ಇನ್‌ಸ್ಪೆಕ್ಟರ್‌ ಸಂದೇಶ್‌ ಪಿ.ಜಿ. ಹಾಗೂ ಸಿಬಂದಿ ಸಂಚಾರ ಸುಗಮಗೊಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next